ಬೆಂಗಳೂರು: ಒಖಿ ಚಂಡಮಾರುತದ ಪ್ರಭಾವಕ್ಕೆ ಒಳಗಾದ ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದರು.
ಈ ವೇಳೆ ಪ್ರಧಾನಿ ಮೋದಿ ಅವರನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿಗಳ ಕೆಲಹೊತ್ತು ಮೋದಿ ಮಾತನಾಡಿದರು.ಬಳಿಕ, ಪ್ರಧಾನಿ ಚಂಡಮಾರುತದಿಂದ ಆದ ಹಾನಿಯ ಕುರಿತು ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿ, ಅದರ ಕುರಿತು ಮಾಹಿತಿ ಪಡೆದರು.
ನಂತರ ಚಂಡಮಾರುತದ ಪ್ರಬಾವಕ್ಕೆ ಒಳಗಾದ ನಿರಾಶ್ರಿತ ಕುಟುಂಬಗಳ ಸದಸ್ಯರ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ಅಲ್ಲಿಂದ ಕೇರಳಕ್ಕೆ ಬಂದ ಮೋದಿ ಅವರನ್ನು ತಿರುವನಂತಪುರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ವಾಗತಿದರು.