ಶ್ರೀನಗರ: ಉಗ್ರರ ಪಡೆ ಐವರು ಪೊಲೀಸ್ ಕುಟುಂಬದ ಸದಸ್ಯರನ್ನೇ ಅಪಹರಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಮೂಲಕ ಭಾರತೀಯ ಭದ್ರತಾ ಪಡೆಗಳಿಗೆ ಉಗ್ರರು ಸವಾಲನ್ನು ಎಸಗಿದ್ದಾರೆ.
ಕುಖ್ಯಾತ ಉಗ್ರ ಸೈಯದ್ ಸಲಾಹುದ್ದೀನ್ನ ಎರಡನೇ ಮಗ ಮತ್ತು ಕೆಲ ಉಗ್ರರ ಸಂಬಂಧಿಕರ ಬಂಧನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಭಯೋತ್ಪಾದಕರು ಪೊಲೀಸರ ಕುಟುಂಬ ಸದಸ್ಯರನ್ನು ಗುರಿಯಾಗಿಸಿದ್ದಾರೆ ಎಂದು ಮೂಲಗಳು ಹೇಳಿವೆ.
28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಈ ರೀತಿ ಪೊಲೀಸರ ಕುಟುಂಬಗಳ ಮೇಲೆ ಸೇಡಿನ ಕೃತ್ಯ ಎಸಗಿದ್ದಾರೆ.