ಡೆಹ್ರಾಡೂನ್ : ಉತ್ತರಾಖಂಡ್ ಹಿಮ ಸ್ಫೋಟದ ಪರಿಣಾಮವಾಗಿ ಉಂಟಾದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಇಂದು 9 ಮಂದಿಯ ಮೃತ ದೇಹ ಪತ್ತೆ ಹಚ್ಚಲಾಗಿದೆ .
ಸುರಂಗದಲ್ಲಿದ್ದ ಮೃತದೇಹಗಳನ್ನು ಇದೀಗ ಹೊರತೆಗೆಯಲಾಗಿದೆ . ಇದರೊಂದಿಗೆ ಹಿಮಪಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 58 ಕ್ಕೆ ಏರಿದೆ . ಫೆಬ್ರವರಿ 7 ರಂದು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಇದೀಗ 146 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ .