ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ 7ನೇ ವಿಮಾನ ಮುಂಬೈಗೆ ಬಂದಿಳಿದಿದೆ. ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 182 ಭಾರತೀಯರು ಆಗಮಿಸಿದ್ದಾರೆ.
ಈ ವೇಳೆ ಕೇಂದ್ರ ಸಚಿವ ನಾರಾಯಣ ಠಾಣೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇದರ ಜತೆಗೆ ದೆಹಲಿಗೆ 216 ಮಂದಿಯನ್ನು ಹೊತ್ತ 8ನೇ ವಿಮಾನ ಬುಡಾಪೆಸ್ಟ್ ನಿಂದ ಹೊರಟಿದ್ದು, 9ನೇ ವಿಮಾನದಲ್ಲಿ 218 ಮಂದಿ ಬುಚಾರೆಸ್ಟ್ ನಿಂದ ತಾಯ್ನಾಡಿಗೆ ಹೊರಟಿದ್ದಾರೆ.