ಉತ್ತರಾಖಾಂಡ: ಬೇಟೆಗೆಂದು ಹೋಗಿದ್ದಾಗ, ಆಕಸ್ಮಿಕವಾಗಿ ಗುಂಡು ತಗುಲಿ ಯುವಕ ಮೃತಪಟ್ಟ ಘಟನೆ ಉತ್ತರಾಖಂಡದ ತೆಹ್ರಿ ಜಿಲ್ಲೆಯ ಕುಂಡಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ರಾತ್ರಿ 18 ರಿಂದ 22 ವರ್ಷ ಪ್ರಾಯದ ಒಳಗಿನ ಏಳು ಜನ ಯುವಕರು ಬಿಲ್ಲಾಂಗಣ ಹಳ್ಳಿಗೆ ಬೇಟೆಗೆಂದು ಹೋಗಿದ್ದರು.
22 ವರ್ಷದ ರಾಜೀವ್ ತನ್ನ ಗುಂಪನ್ನು ಮುನ್ನಡೆಸುತ್ತಾ ಸಾಗುತ್ತಿದ್ದಾಗ ಜಾರಿ ಬಿದ್ದರು. ಈ ಸಂದರ್ಭ ಅವರ ಕೈಯಲ್ಲಿದ್ದ ಪಿಸ್ತೂಲ್ ಲೋಡ್ ಆಗಿದ್ದು, ಜಾರಿಬಿದ್ದ ಪರಿಣಾಮವಾಗಿ ಗುಂಡು ತನ್ನ ಜೊತೆಗಿದ್ದ ಸಂತೋಷ್ ಗೆ ತಗುಲಿತು.
ಸಂತೋಷ್ ತಕ್ಷಣವೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವ ಕಂಡು ರಾಜೀವ್ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯಿಂದಾಗಿ ಪಶ್ಚಾತಾಪಕ್ಕೊಳಗಾದ ಮೂವರು ಸ್ನೇಹಿತರು, ಸೋಬನ್, ಪಂಕಜ್ ಮತ್ತು ಅರ್ಜುನ್ ಕೀಟನಾಶಕ ತಿಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಈ ವೇಳೆ ಘಟನಾ ಸ್ಥಳದಲ್ಲಿದ್ದ ಇನ್ನಿರ್ವ ಸ್ನೇಹಿತರಾದ ರಾಹುಲ್, ಸುಮಿತ್ ಹತ್ತಿರದ ಹಳ್ಳಿಗರಿಗೆ ಮಾಹಿತಿ ನೀಡಿದರು.
ಈ ಮೂವರನ್ನು ಬೇಲೇಶ್ವರ್ ನ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಪಂಕಜ್ ಹಾಗೂ ಅರ್ಜುನ್ ಮಾರ್ಗ ಮಧ್ಯದಲ್ಲೇ ಮೃತ ಪಟ್ಟಿದ್ದು, ಸೋಬನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.