ಉಡುಪಿ: ಉಡುಪಿ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಧ್ಯೆ ಡಿಸೆಂಬರ್ ತಿಂಗಳಲ್ಲೂ ಮಳೆ ಸುರಿಯುತ್ತಿದ್ದು ರಸ್ತೆ ರಿಪೇರಿಗೂ ತೊಡಕಾಗಿದೆ. ಇದೇ ವೇಳೆ ಪುಟಾಣಿ ವಿದ್ಯಾರ್ಥಿಯೊಬ್ಬ ನಗರಸಭೆ ಆಯುಕ್ತರಿಗೆ ದೂರು ಹೇಳಿದ್ದಾನೆ.
ನಮ್ಮ ಶಾಲೆಯ ರಸ್ತೆ ಸರಿ ಇಲ್ಲ, ಸರಿಪಡಿಸಿ ಎಂದು ನಗರಸಭೆ ಆಯುಕ್ತರಿಗೆ ಮುಕುಂದ ಕೃಪ ಶಾಲೆಯ ಪುಟಾಣಿ ವಿದ್ಯಾರ್ಥಿ ತನ್ಮಯ್ ಕಾಮತ್ ಮನವಿ ಮಾಡಿದ್ದಾನೆ. ಬಾಲಕನ ಮಾತನ್ನು ಆಲಿಸಿದ ಆಯುಕ್ತರು ಸರಿಪಡಿಸುವ ಭರವಸೆ ನೀಡಿದ್ದಾರೆ.

