ಉಡುಪಿ: ಶ್ರೀಕೃಷ್ಣ ಮಠದ‌ ಕನಕಗೋಪುರದ ಮುಂಭಾಗ ಯುವತಿಯೊಬ್ಬಳು ಏಕಾಏಕಿ ಕುಸಿದುಬಿದ್ದಿದ್ದಾಳೆ. ಅಸಹಾಯಕ ಸ್ಥಿತಿಯಲ್ಲಿದ್ದ ಈಕೆಗೆ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಬಳಿಕ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಆಕೆಯನ್ನು ರಕ್ಷಿಸಿ ಆಕೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದರು.‌ ರಕ್ಷಿಸಲ್ಪಿಟ್ಟಿರುವ ಯುವತಿ ಗುಜ್ಜರಬೆಟ್ಟು ನಿವಾಸಿ ಎಂದು ತಿಳಿದುಬಂದಿದೆ.