ಮುಂಬೈ: ಅಟಲ್ ಸೇತುವೆ ಮಾರ್ಗದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಟಾಟಾ ಟೆಕ್ಸಾನ್​ ಕಾರ್​​ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಸೇತುವೆಯಿಂದ ಸಮುದ್ರಕ್ಕೆ ಜಿಗಿದಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೊಂಬಿವೇಲಿ ನಿವಾಸ ಕೆ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಮುಂಬೈನ ಅಟಲ್ ಸೇತುವಿನ ಕೊನೆಯ ಪಾಯಿಂಟ್ ಆದ ನ್ಹಾವಾ ಸೇವಾ ಬಳಿ ತನ್ನ ಕಾರ್ ಪಾರ್ಕ್​ ಮಾಡಿ ಬ್ರಿಡ್ಜ್​ನ ಗೋಡೆಯನ್ನು ಏರಿ ಸಮುದ್ರಕ್ಕೆ ನೆಗೆದಿದ್ದಾನೆ. ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕುಟುಂಬದವರು ನೀಡಿದ ಮಾಹಿತಿ ಪ್ರಕಾರ ಶ್ರೀನಿವಾಸ್ ಕಳೆದ ಕೆಲವು ದಿನಗಳಿಂದ ವಿಪರೀತ ಹಣದ ಸಮಸ್ಯೆಯಿಂದ ಬಳಲುತ್ತಿದ್ದರಂತೆ ಅದೇ ಕಾರಣವೇ ಅವರನ್ನು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.