ಅಸ್ಸಾಂ: ಕಳೆದ ಕೆಲವು ದಿನಗಳಿಂದ ಅಸ್ಸಾಂನಲ್ಲಿ ಭೀಕರ ಮಳೆಯಾಗುತ್ತಿದ್ದು ಜನರು ಪ್ರವಾಹದಿಂದ ಬೇಸತ್ತು ಹೋಗಿದ್ದಾರೆ. ಇದರಿಂದ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 19 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಸದ್ಯ ಇದರ ನಡುವೆ ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಪುಟ್ಟ ಆನೆಯ ಮರಿಯನ್ನು ರಕ್ಷಣಾ ಪಡೆ ಕಾಪಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಸ್ಸಾಂನ ಚಿರಾಂಗ್ ಪ್ರದೇಶದ ಬಳಿಯ ಐಯೆ ನದಿ ನೀರಿನಲ್ಲಿ ಪುಟ್ಟ ಆನೆ ಮರಿಯೊಂದು ಕೊಚ್ಚಿಕೊಂಡು ಹೋಗುತ್ತಿತ್ತು. ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದ ಮರಿ ಆನೆ ನೀರಿನಲ್ಲಿ ಇನ್ನಿಲ್ಲದ ಕಷ್ಟ ಅನುಭವಿಸುತ್ತಿತ್ತು. ಇದನ್ನು ನೋಡಿದ ಅರಣ್ಯಾಧಿಕಾರಿಗಳು ಸೇತುವೆ ಮೇಲಿಂದ ಹಗ್ಗ ಬಿಟ್ಟು ಅದನ್ನು ಆನೆ ಮರಿಗೆ ಕಟ್ಟಿ ಮೇಲೆತ್ತಿದ್ದಾರೆ. ಇದರ ವಿಡಿಯೋ ವೈರಲ್ ಆಗ್ತಿದೆ.
ಸದ್ಯ ಈ ಬಗ್ಗೆ ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ ಎಕ್ಸ್ನಲ್ಲಿ ಆನೆ ಮರಿಯ ವಿಡಿಯೋ ಶೇರ್ ಮಾಡಿದ್ದಾರೆ. ಮರಿಯನ್ನು ಮಾನಸ ನ್ಯಾಷನಲ್ ಪಾರ್ಕ್ ಅರಣ್ಯಾಧಿಕಾರಿಗಳ ತಂಡಕ್ಕೆ ಒಪ್ಪಿಸಲಾಗಿದೆ. ಅದರ ತಾಯಿಯನ್ನು ಹುಡಕಲು ನಮ್ಮ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
Monsoons can be rough even on our gentle giants 🐘
Recently, our forest officials rescued a baby elephant who lost her way along the Aie River in Chirang. She is currently being treated at Manas National Park as we try and establish contact with her mother 🤞#TeamAssam pic.twitter.com/lttTws8v4N
— Himanta Biswa Sarma (@himantabiswa) July 2, 2024