ವಿಜಯನಗರ: ಈ ಬಾರಿಯ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಆಸೀಸ್ ಪಡೆ ಗೆದ್ದಿದೆ. ಭಾರತ ಸೋತಿದ್ದಕ್ಕೆ ಕೆಲ ಕಿಡಿಗೇಡಿಗಳು ಸಾರ್ವಜನಿಕರ ವೀಕ್ಷಣೆಗೆ ಅಳವಡಿಸಲಾಗಿದ್ದ ಎಲ್ಇಡಿ ಪರದೆಗೆ ಕಲ್ಲು ಎಸೆದಿರುವ ಘಟನೆ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಸೋಲನ್ನು ಸಹಿಸಿಕೊಳ್ಳದ ಕೆಲ ಕಿಡಿಗೇಡಿಗಳು ಕೊನೆಯ ಓವರ್ ವೇಳೆ ಕಲ್ಲು ಎಸೆದಿದ್ದಾರೆ. ಸಾರ್ವಜನಿಕರು ವಿಶ್ವಕಪ್ ಫೈನಲ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ನೋಡಲೆಂದು ಸರ್ಕಾರ ಎಲ್ಇಡಿ ಹಾಕಿಸಿತ್ತು. ಕ್ರೀಡಾ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಇಡಿ ಹಾಕುವಂತೆ ಸರ್ಕಾರ ಸೂಚನೆ ನೀಡಿತ್ತು.
ಭಾರತ 50 ಓವರ್ಗೆ 10 ವಿಕೆಟ್ ನಷ್ಟಕ್ಕೆ 240 ರನ್ ಗಳಿಸುವ ಮೂಲಕ 241 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಆಸೀಸ್ 43 ಓವರ್ಗೆ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ ಬರೋಬ್ಬರಿ 6 ವಿಕೆಟ್ಗಳ ಜಯ ದಾಖಲಿಸಿತು.