ದೆಹಲಿ: ಇಂಡೋ-ಆಸಿಸ್ ಸೆಮಿಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ನಮೋ ಮೈದಾನದಲ್ಲಿ ನಡೆಯೋ ಫೈನಲ್ ಫೈಟ್ನಲ್ಲಿ ಆಸ್ಟ್ರೇಲಿಯಾ ಹೆಡೆಮುರಿ ಕಟ್ಟಲು ರೋಹಿತ್ ಸೈನ್ಯ ತುದಿಗಾಲಲ್ಲಿ ನಿಂತಿದೆ. ಇಂದಿನ ಮೆಗಾ ಫೈಟ್ನಲ್ಲಿ ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಫಿಕ್ಸ್ ಆಗಿದ್ದಾರೆ.
“ಈ ವಿಶ್ವಕಪ್ನಲ್ಲಿ ಭಾರತ ತಂಡದ ಅತ್ಯದ್ಭುತ ಯಶಸ್ಸಿಗೆ ಹೆಡ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಕಾರಣ, ಹೀಗಾಗಿ ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ದ್ರಾವಿಡ್ಗೆ ಉಡುಗೊರೆಯಾಗಿ ನೀಡಲು ಟೀಮ್ ಇಂಡಿಯಾ ನಿರ್ಧರಿಸಿದೆ” ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಫೈನಲ್ ಹಣಾಹಣಿಗೂ ಮುನ್ನ ಸುದ್ದಿಘೋಷ್ಟಿಯಲ್ಲಿ ಮಾತನಾಡಿ, ದ್ರಾವಿಡ್ ಅವರು ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನದೆಯಾದ ಶೈಲಿಯಲ್ಲಿ ಆಟವಾಡಲು ಸ್ವಾತಂತ್ರ್ಯವನ್ನು ನೀಡಿದ್ದಾರೆ. ಸವಾಲಿನ ಸಂದರ್ಭಗಳಲ್ಲಿ ಪ್ರತಿ ಆಟಗಾರನಿಗೆ ದ್ರಾವಿಡ್ ಅವರು ಬೆಂಬಲಿಸಿ ಹುರಿದುಂಬಿಸುತ್ತಾರೆ. ಮತ್ತು ಈ ಹಂತಕ್ಕೆ ಭಾರತ ತಲುಪಲು ರಾಹುಲ್ ಬಾಯ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್ಗೋಸ್ಕರ ಈ ಬಾರಿ ವಿಶ್ವಕಪ್ ಗೆಲ್ಲುವ ಬಹುದೊಡ್ಡ ಜವಾಬ್ದಾರಿ ತಂಡದ ಮೇಲಿದೆ ಎಂದಿದ್ದಾರೆ.