ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ಗಳು ಹಸ್ತಕ್ಷೇಪ ಮಾಡಿ ಫಲಿತಾಂಶವನ್ನು ಬದಲಿಸಿ ಆರ್.ಸಿ.ಬಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಪಂದ್ಯದ ವೇಳೆಯಲ್ಲಿ ಅಂಪೈರ್ಗಳು ತೆಗೆದುಕೊಂಡ ನಿರ್ಧಾರಗಳು ಮುಂಬೈ ಇಂಡಿಯನ್ಸ್ ಪರವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಟಾಸಿಂಗ್ ಸಮಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನುಕೂಲವಾಗುವಂತೆ ಕಾಯಿನ್ ತಿರುಗಿಸಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ. ಆರ್ಸಿಬಿ ಬ್ಯಾಟಿಂಗ್ ಮಾಡುವಾಗ ಹಲವು ಬೌಂಡರಿಗಳು ಹೋಗಿದ್ದರೂ ಅದನ್ನು ಪರಿಗಣಿಸದ ಕಾರಣ ರನ್ಗಳು ಕಡಿಮೆ ಆಗಿವೆ. ಮಹಿಪಾಲ್ ಲೋಮ್ರೋರ್ ಮೊದಲ ಬಾಲ್ನಲ್ಲೇ ಔಟ್ ಆಗದಿದ್ದರೂ ಔಟ್ ನೀಡಲಾಯಿತು. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನೋ ಬಾಲ್ ನೀಡದೆ ಇದ್ದದ್ದು. ಈ ಎಲ್ಲವೂ ಆರ್ಸಿಬಿ ಸೋಲಿಗೆ ಕಾರಣ ಎಂದು ದೂರಲಾಗಿದೆ.