News Karnataka Kannada
Monday, April 29 2024
ಕ್ರೀಡೆ

 ಉಜಿರೆ: ಶಿಕ್ಷಣ ಹಾಗೂ ಕ್ರೀಡೆಗೆ ಅವಿನಾಭಾವ ಸಂಬಂಧವಿದೆ- ಡಾ.ಸತೀಶ್ಚಂದ್ರ ಎಸ್

Sdm (1)
Photo Credit : By Author

 ಉಜಿರೆ: ಶಿಕ್ಷಣ ಹಾಗೂ ಕ್ರೀಡೆಗೆ ಅವಿನಾಭಾವ ಸಂಬಂಧವಿದೆ. ಕ್ರೀಡೆಯಲ್ಲಿ ಮುಂದೆ ಇರುವವರು ಶಿಕ್ಷಣದಲ್ಲಿ ಹಿಂದೆ ಇರುತ್ತಾರೆ ಎಂಬ ಮನೋಭಾವನ್ನು ತೊಡೆದು ಹಾಕಬೇಕು. ವ್ಯಕ್ತಿ ಜನಪ್ರಿಯನಾಗಲು ಕ್ರೀಡೆ ಉತ್ತಮ ವೇದಿಕೆ ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಹೇಳಿದರು.

ಅವರು ಉಜಿರೆಯ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ಮಂಗಳವಾರ ನಡೆದ ದ.ಕ. ಉಡುಪಿ ಮಟ್ಟದ ಪಾಲಿಟೆಕ್ನಿಕ್ ಕಾಲೇಜಿನ ಪುರುಷರ ವಾಲಿಬಾಲ್ ಪಂದ್ಯಾಟವನ್ನ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ದಾ..ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿ ಚಟುವಟಿಕೆಗಳಿಗೂ ಮಹತ್ವದ ಪಾತ್ರ ನೀಡಲಾಗುತ್ತದೆ.

ಕ್ರಿಯೇಟಿವಿಟಿ, ಇನೋವೇಶನ್ ಕ್ರೀಡೆಯಲ್ಲಿದೆ. ಕ್ರೀಡೆ ಎನ್ನುವುದು ಮನೋರಂಜನೆ, ವ್ಯಾಯಾಮ ಮಾತ್ರವಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗುತ್ತದೆ ಎಂದರು.

ಕ್ರೀಡೆಯ ಜನಪ್ರಿಯತೆಗೆ ಇತ್ತೀಚೆಗೆ ನಡೆದ ವಿಶ್ವಕಪ್ ಫುಟ್ ಬಾಲ್ ಪಂದ್ಯಾಟವೆ ಸಾಕ್ಷಿ.ಆಟಗಾರ ಅನುಭವದಿಂದ ಪಕ್ವಗೊಂಡತೆ ಎದುರಾಳಿಯ ತಂತ್ರ ಅರಿತು ಗೆಲ್ಲಲು ಸಾಧ್ಯ ಎಂದರು.

ಎಸ್.ಡಿ.ಎಂ. ಕ್ರೀಡಾ ಕ್ಲಬ್ ಕಾರ್ಯದರ್ಶಿ ರಮೇಶ್, ಪಾಲಿಟೆಕ್ನಿಕ್ ಕಾಲೇಜು ಪ್ರಿನ್ಸಿಪಾಲ್ ಸಂತೋಷ್,
ಕಾಲೇಜು ವ್ಯವಸ್ಥಾಪಕ ಚಂದ್ರನಾಥ್ ಜೈನ್, ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಎಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ.ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ನಿಕಿತ್ ಜೈನ್ ಸ್ವಾಗತಿಸಿದರು. ಸಂಪತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು ಮಿಥುನ್ ಜೈನ್‌ ವಂದಿಸಿದರು. ಉಭಯ ಜಿಲ್ಲೆಗಳ 12 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು