ಇತ್ತೀಚೆಗೆ ಶನಿವಾರ ಪಲ್ಲೆಕೆಲೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದಿದೆ. ಭಾರತ ತಂಡದ ಹೊಸ ಕ್ಯಾಪ್ಟನ್​​​ ಸೂರ್ಯಕುಮಾರ್​ ಯಾದವ್​​ ನೇತೃತ್ವದಲ್ಲಿ ಟೀಮ್​ ಇಂಡಿಯಾ ಮೊದಲ ಗೆಲುವು ಸಾಧಿಸಿದೆ.

3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್​ ಇಂಡಿಯಾ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಇಂದು 2ನೇ ಟಿ20 ಪಂದ್ಯ ನಡೆಯಬೇಕಿದ್ದು, ಟೀಮ್​ ಇಂಡಿಯಾ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಶ್ರೀಲಂಕಾ ಜಿದ್ದಿಗೆ ಬಿದ್ದಿತ್ತು. ಈಗ ಶ್ರೀಲಂಕಾ ಕನಸಿಗೆ ಮಳೆ ತಣ್ಣೀರೆರಚಿದೆ.

ಪಲ್ಲೆಕೆಲೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ, ಟೀಮ್​ ಇಂಡಿಯಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹಾಗಾಗಿ ಕಳೆದ 3 ಗಂಟೆಗಳಿಂದ ಜೋರು ಮಳೆ ಬೀಳುತ್ತಿದ್ದು, ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.