Bengaluru 29°C
Ad

ಫೈನಲ್​ ಸೋಲಿನ ಕುರಿತು ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್ರಮ್​ ಹೇಳಿದ್ದಿಷ್ಟು

Captain Markram

ಬಾರ್ಬಡೋಸ್​: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಗೆದ್ದು ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಕನಸು ಭಗ್ನಗೊಂಡಿದ್ದು, ಟೀಮ್​ ಇಂಡಿಯಾ ವಿರುದ್ಧ 7 ರನ್​ಗಳ ಸೋಲುಂಡಿದೆ. ಗೆಲ್ಲಬಹುದಾಗಿತ್ತಾ ಪಂದ್ಯವನ್ನು ಸೋಲುಂಡ ಕುರಿತು ದಕ್ಷಿಣ ಆಫ್ರಿಕಾದ ನಾಯಕ ಏಡೆನ್​ ಮಾರ್ಕ್ರಮ್​ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.

Ad
300x250 2

ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ಮಾರ್ಕ್ರಮ್​, ಸದ್ಯಕ್ಕೆ ನಮಗೆ ಧೈರ್ಯ ತುಂಬಿದೆ ಎಂದು ಹೇಳುತ್ತೇನೆ. ಸೋತಿರುವುದು ನಮಗೆ ನೋವುಂಟು ಮಾಡುತ್ತದೆ. ಆದರೆ, ನಮ್ಮ ಆಟಗಾರರು ಅಡಿದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಚೆನ್ನಾಗಿ ಬ್ಯಾಟ್​ ಮಾಡಿದ್ದೆವು. ಆದರೆ, ಅವರು ಬೌಲಿಂಗ್​ ಮಾಡಿದ ರೀತಿ ಅದ್ಭುತವಾಗಿತ್ತು.

ಅಭಿಯಾನದಲ್ಲಿ ನಾವು ಬಹಳಷ್ಟು ಆಟವನ್ನು ನೋಡಿದ್ದು, ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತ ಮುಗಿಯುವವರೆಗೂ ಪಂದ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾವು ಆಡಿದ ರೀತಿ ನಮಗೆ ಖುಷಿ ನೀಡಿದ್ದು, ನಾವು ಫೈನಲ್​ಗೆ ಅರ್ಹರಾಗಿದ್ದೆವು. ಪಂದ್ಯವನ್ನು ಗೆಲ್ಲಬಹುದಿತ್ತು. ಎದುರಾಳಿ ನೀಡಿದ್ದ ಟಾರ್ಗೆಟ್​ಅನ್ನು (176) ಸುಲಭವಾಗಿ ಚೇಸ್​ ಮಾಡಬಹುದು ಎಂದುಕೊಂಡೆವು. ಅಂತಿಮವಾಗಿ ಅವರು ಬೌಲ್​ ಮಾಡಿ ಕಂಟ್ರೋಲ್​ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಕಮ್​ಬ್ಯಾಕ್​ ಮಾಡುತ್ತೇವೆ. ನಮ್ಮ ತಂಡದ ಪ್ರದರ್ಶನ ಹೆಮ್ಮೆ ಹಾಗೂ ಖುಷಿ ನೀಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ನಾಯಕ ಏಡೆನ್​ ಮಾರ್ಕ್ರಮ್​ ಹೇಳಿದ್ದಾರೆ.

Ad
Ad
Nk Channel Final 21 09 2023
Ad