ಬೆಂಗಳೂರು: ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್​​​​​​​​-18ಕ್ಕೆ ತಯಾರಿ ನಡೆಸುತ್ತಿದೆ. ಹೊಸ ಸೀಸನ್​​​​ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್​​​​​​ ಮೇಲೆ ಕಣ್ಣಿಟ್ಟಿದೆ.

ಫಾಫ್​ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್​ ಕ್ಯಾಪ್ಟನ್​​ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್​ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್​​ನಲ್ಲಿ ಮಾಡಿದೆ.

ಡುಪ್ಲೆಸಿ ಬದಲು ಕನ್ನಡಿಗ ಕೆ.ಎಲ್.ರಾಹುಲ್​​ಗೆ ಮಣೆ ಹಾಕೋ ಪ್ಲಾನ್​ ತಂಡದಲ್ಲಿ ನಡೆದಿದೆ. ಫ್ಯಾನ್ಸ್​​ ಒತ್ತಾಯವೂ ಇದೇ ಆಗಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ರಾಹುಲ್​ನ ಬಿಡ್ ಮಾಡಲು 25 ಕೋಟಿ ಪಕ್ಕಕ್ಕಿಟ್ಟಿದೆ ಎನ್ನಲಾಗಿದೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗುವುದಾದರೇ, ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್​ ಮೇಲೆ ಕಣ್ಣಿಟ್ಟಿದೆ ನಿಜ. ಆದ್ರೆ, ಮೆಗಾ ಹರಾಜಿನಲ್ಲಿ ಇವರು ಸಿಗಲಿಲ್ಲ ಅಂದ್ರೆ, ಆರ್​ಸಿಬಿ ವಿರಾಟ್​ ಕೊಹ್ಲಿಯನ್ನೇ ನಾಯಕನಾಗಿ ನೇಮಿಸುವ ಧೃಡ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ.