News Karnataka Kannada
Tuesday, May 14 2024
ಕ್ರೀಡೆ

‘ಭಾರತ ತಂಡ ಟಾಸ್ ಫಿಕ್ಸಿಂಗ್ ಮಾಡುತ್ತಿದೆ’: ಪಾಕ್ ಮಾಜಿ ಕ್ರಿಕೆಟಿಗ ಆರೋಪ

Pak Ind
Photo Credit : News Kannada

ವಿಶ್ವಕಪ್​​ನಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ ತಂಡ ತವರು ಸೇರಿದೆ. ಮತ್ತೊಂದು ಕಡೆ ಅಪ್ರತಿಮ ಪ್ರದರ್ಶನ ನೀಡುತ್ತಿರುವ ಭಾರತ ತಂಡವು ಫೈನಲ್ ಪ್ರವೇಶ ಮಾಡಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪ್ರದರ್ಶಿಸುತ್ತಿರುವ ಅದ್ಭುತ ಹೋರಾಟವನ್ನು ಪಾಕಿಸ್ತಾನಕ್ಕೆ ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಂಭೀರವಾದ ಆರೋಪವನ್ನು ಮಾಡುತ್ತಿದೆ.

ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಕಂದರ್ ಬಖ್ತ್, ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಉದ್ದೇಶಪೂರ್ವಕವಾಗಿ ನಾಣ್ಯವನ್ನು ಮೇಲಕ್ಕೆ ಚಿಮ್ಮುತ್ತಾರೆ. ಅದನ್ನು ಇತರೆ ತಂಡದ ನಾಯಕರು ಗಮನಿಸಲು ಹೋಗುವುದಿಲ್ಲ. ಪರಿಣಾಮ ರೋಹಿತ್ ಪರವಾಗಿ ಟಾಸ್ ನಿರ್ಧಾರ ಬರುತ್ತದೆ. ನಾನು ಹೇಳುವುದು ಸತ್ಯ, ಅದಕ್ಕೆ ರೋಹಿತ್ ಶರ್ಮಾ ಟಾಸ್ ವೇಳೆ ನಾಣ್ಯವನ್ನು ಚಿಮ್ಮುವ ಶೈಲಿಗೂ, ಇತರೆ ತಂಡದ ಕ್ಯಾಪ್ಟನ್ ನಾಣ್ಯವನ್ನು ಎಸೆಯುವ ರೀತಿಯನ್ನು ನೀವು ಗಮನಿಸಬೇಕು ಎಂದಿದ್ದಾರೆ.

ರೋಹಿತ್ ಹಾರಿಸಿದ ನಾಣ್ಯದ ಮೇಲ್ಭಾಗ ಎದುರಾಳಿ ತಂಡದ ಕ್ಯಾಪ್ಟನ್​ಗೆ ಕಾಣುವುದಿಲ್ಲ. ಇದರಿಂದ ಟಾಸ್ ಮಾಡಿ ಏನು ಪ್ರಯೋಜನ? ಯಾಕಂದರೆ ಕ್ರಿಕೆಟ್ ಅನ್ನು ಬಿಸಿಸಿಐ ನಿಯಂತ್ರಿಸುತ್ತಿದೆ. ಐಸಿಸಿ ಈ ಬಗ್ಗೆ ಮಾತನಾಡುವುದಿಲ್ಲ. ಪರಿಣಾಮ ಭಾರತ ಗೆಲ್ಲುತ್ತ ಬಂದಿದೆ. 2011ರ ವಿಶ್ವಕಪ್‌ನಲ್ಲಿ ಭಾರತದ ಗೆಲುವು ಕೂಡ ವಿವಾದಗಳಿಂದ ಕೂಡಿತ್ತು ಎಂದು ಕಿಡಿಕಾರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು