ಮಂಗಳೂರು: ಬೆಂಗಳೂರು ಚೆನ್ನಮ್ಮನ ಕೆರೆ ಸ್ಕೆಟಿಂಗ್ ರಿಂಕ್ ನಲ್ಲಿ ರೋಲರ್ ಸ್ಕೇಟಿಂಗ್ ಫೆಡರೇಶನ್ ಒಫ್ ಇಂಡಿಯಾ (ಆರ್ ಎಸ್ ಎಫ್ ಐ)ರವರು ದಿನಾಂಕ16-11-2022ರಿಂದ 19-11-2022ರ ತನಕ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ (ಕ್ವಾಡ್ ವಿಭಾಗ )11ರಿಂದ 14ವರ್ಷದ ವಿಭಾಗದಲ್ಲಿ ನಿರ್ಮಯ್ ವೈ ಎನ್ ರವರು ರೋಡ್ ರೇಸ್ 1500ಮಿ ನಲ್ಲಿ ಬೆಳ್ಳಿ ಪದಕ 500ಮಿ ರಿಂಕ್ ರೇಸ್ ನಲ್ಲಿ ಕಂಜಿನ ಪದಕ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬೆಳಗಾವಿಯಲ್ಲಿ ದಿನಾಂಕ 23-11-2022ರಂದು ಸ್ಕೂಲ್ ಗೇಮ್ಸ್ ಫೆಡರೇಷನ್ ಒಫ್ ಇಂಡಿಯಾ ನಡೆಸಿದ ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ 2000ಮಿ ರೋಡ್ ರೇಸ್ ಮತ್ತು 1000ಮೀ ರಿಂಕ್ ರೇಸ್ ನಲ್ಲಿ 2ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರುತ್ತಾರೆ. ಇವರು ಉರ್ವ ದ ಯದುನಂದನ್ ವಿಜಯಲಕ್ಷ್ಮಿ ದಂಪತಿ ಪುತ್ರರಾಗಿದ್ದು ಪ್ರಸ್ತುತ ಲೇಡಿ ಹಿಲ್ ಸಂತ ಅಲೋಸಿಎಸ್ ಪ್ರೌಢಶಾಲೆ ಯಲ್ಲಿ 8ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಫ್ ಡಿ ಎಸ್ ಸಿ ಹೈ ಫ್ಲೈಯೆರೆಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯರಾಗಿದ್ದು ಜಯರಾಜ್ ಮೋಹನ್ ರಾಮನ್ ಮತ್ತು ಹರ್ಷದ್ ಹುಸೇನ್ ಇವರಿಂದ ತರಬೇತು ಪಡೆಯುತ್ತಿದ್ದಾರೆ