ಬೆಂಗಳೂರು: ರಾಜ್ಯಾದ್ಯಂತ ಐಪಿಎಲ್ನ ಹವಾ ಜೋರಾಗಿದೆ. ಮೊನ್ನೆ ಬೆಂಗಳೂರಲ್ಲಿ ಆರ್ಸಿಬಿ ಮ್ಯಾಚ್ ನಡೆಯಿತು. ಈ ಮ್ಯಾಚ್ ನೋಡಲು ಸಾವಿರಾರು ಮಂದಿ ಟಿಕೇಟ್ ಪಡೆದಿದ್ದರು. ಪಂದ್ಯದ ನಂತರ ಕೊರೊನಾ ವೈರಸ್ ಕಂಟಕ ಎದುರಾಗಿದೆ.
ಪಂದ್ಯ ನಡೆದ ದಿನ ಕ್ರೀಡಾಂಗಣ ಮತ್ತು ಸುತ್ತಮುತ್ತ ಸಾವಿರಾರು ಅಭಿಮಾನಿಗಳು ಸೇರಿದ್ದರು. ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಐಪಿಎಲ್ ಮ್ಯಾಚ್ ನೋಡಲು 30-35 ಸಾವಿರ ಜನ ಒಂದಡೆ ಗುಂಪು ಸೇರುತ್ತಿರುವುದು ಕೊರೊನಾ ವೈರಸ್ ಏರಿಕೆಯ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಆರೋಗ್ಯ ಇಲಾಖೆ ಕೊರೊನಾ ವೈರಸ್ ಏರಿಕೆಯ ಆತಂಕ ಹೊರ ಹಾಕಿದೆ. ಈ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರತ್ಯೇಕ ರೂಲ್ಸ್ ತರಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ. ಒಂದು ವೇಳೆ ಕೊರೊನಾ ವೈರಸ್ ಏರಿಕೆಯಾದರೇ, ಮೈದಾನದ ಒಳಗೆ ಪ್ರವೇಶಿಸುವಾಗ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಅನ್ನು ಜಾರಿ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ ರಂದೀಪ್ ಹೇಳಿದ್ದಾರೆ.