ಮುಂಬೈ: ಟೀಮ್​ ಇಂಡಿಯಾದ ನೂತನ ಹೆಡ್​ ಕೋಚ್​ ಗೌತಮ್​ ಗಂಭೀರ್​ ಮೊದಲ ಸೆಲೆಕ್ಷನ್​​ ಮೀಟಿಂಗ್​ನಲ್ಲೇ ಮೇಲುಗೈ ಸಾಧಿಸಿದ್ದಾರೆ. ಗಂಭೀರ್​ ಬಿಗಿಪಟ್ಟಿಗೆ ಕಿಂಗ್​ ಕೊಹ್ಲಿಯೇ ತಲೆಬಾಗಿದ್ರೆ, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯಗೆ ಶಾಕ್​ ಎದುರಾಗಿದೆ. ಟೀಮ್​ ಸೆಲೆಕ್ಷನ್​ ಮಾಡಿದ್ದು ಸೆಲೆಕ್ಷನ್​ ಕಮಿಟಿಯಾದ್ರೂ, ಆಯ್ಕೆ ವಿಚಾರದಲ್ಲಿ ಗಂಭೀರ್​ ಗೇಮ್​ ಆಡಿದ್ದಾರೆ. ಇದರಿಂದ ಕೊಹ್ಲಿ ಬಾಗಿದ್ದಾರೆ.

ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಸೀನಿಯರ್ಸ್​ ರೆಸ್ಟ್​ ಬಯಸಿದ್ರು. ಗೌತಮ್​ ಗಂಭೀರ್​ ಮುಂಬರೋ ಚಾಂಪಿಯನ್ಸ್​ ಟ್ರೋಫಿ ದೃಷ್ಟಿಯಿಂದ ಸೀನಿಯರ್ಸ್​ ಆಡಲೇಬೇಕು ಬಿಗಿ ಪಟ್ಟು ಹಿಡಿದಿದ್ರು. ಕೊನೆಗೂ ಗೌತಿ ಒತ್ತಾಯಕ್ಕೆ ಸೀನಿಯರ್ಸ್​ ಮಣಿದಿದ್ದಾರೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಏಕದಿನ ಸರಣಿಯನ್ನಾಡಲು ಜೈ​​ ಎಂದಿದ್ದಾರೆ.

ರೋಹಿತ್​ ಶರ್ಮಾ ಬಳಿಕ ಕೆ.ಎಲ್​ ರಾಹುಲ್​ ಹಾಗೂ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಗೌತಮ್​​ ಗಂಭೀರ್​ ಇಬ್ಬರ ಕನಸಿಗೆ ತಣ್ಣೀರೆರೆಚಿದ್ದಾರೆ. ಟಿ20 ನಾಯಕತ್ವವನ್ನ ಸೂರ್ಯಕುಮಾರ್​ಗೆ ನೀಡಿ ಶಾಕ್​ ಕೊಟ್ಟಿದ್ದಾರೆ.