ಮುಂಬೈ: ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ ಶುರುವಾಗಲಿದೆ. ದುಲೀಪ್​​ ಟ್ರೋಫಿ 5ನೇ ತಾರೀಕಿನಿಂದ 22ರ ತನಕ ನಡೆಯಲಿದೆ. ವಿಶೇಷ ಎಂದರೆ ಸೀನಿಯರ್​ ಆಟಗಾರರು ದೇಶೀಯ ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಎಂದಿನಂತೆ ಈ ಸಲವೂ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಅದಕ್ಕಾಗಿ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ ಹಾಗೂ ಇಂಡಿಯಾ ಡಿ ಅನೌನ್ಸ್ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ತಂಡಗಳನ್ನು ಆಯ್ಕೆ ಮಾಡಿದ್ದು, ಕನ್ನಡಿಗ ಕೆ.ಎಲ್​ ರಾಹುಲ್​ಗೆ ಮತ್ತೆ ಮೋಸ ಆಗಿದೆ.

ಇಂಡಿಯಾ ಎ ತಂಡವನ್ನು ಶುಭ್ಮನ್​ ಗಿಲ್​ ಮುನ್ನಡೆಸಲಿದ್ದಾರೆ. ಶುಭ್ಮನ್​ ಗಿಲ್​ ನಾಯಕತ್ವದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಆಡಬೇಕಿದೆ. ಇದು ಹಿರಿಯ ಆಟಗಾರ ಕೆ.ಎಲ್​ ರಾಹುಲ್​ಗೆ ಮಾಡಿದ ಅವಮಾನ ಆಗಿದೆ. ಆದ್ರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕೆ.ಎಲ್​ ರಾಹುಲ್​ ಪ್ರಾಕ್ಟೀಸ್​ ಶುರು ಮಾಡಿದ್ದಾರೆ. ಇಂದು ನೆಟ್​​ನಲ್ಲಿ ಬೆವರು ಹರಿಸಿದ ವಿಡಿಯೋಗಳು ವೈರಲ್​ ಆಗಿವೆ. ನಿವೃತ್ತಿ ಪೋಸ್ಟ್​ ಹಾಕಿ ಡಿಲೀಟ್​ ಮಾಡಿದ ಬೆನ್ನಲ್ಲೇ ಕೆ.ಎಲ್​ ರಾಹುಲ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಭಾರತ ತಂಡದ ಸ್ಟಾರ್​ ವಿಕೆಟ್​ ಕೀಪರ್​​ ಕೆ.ಎಲ್​​ ರಾಹುಲ್​ ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ಸುದ್ದಿ ಒಂದು ವೈರಲ್​ ಆಗಿದೆ. ಇಂದು ಕೆ.ಎಲ್​​ ರಾಹುಲ್​​ ತನ್​ ಇನ್​ಸ್ಟಾಗ್ರಾಮ್​ನಲ್ಲಿ ನಿವೃತ್ತಿ ಪೋಸ್ಟ್​ ಹಾಕಿ ಡಿಲೀಟ್​ ಮಾಡಿದ್ದಾರೆ ಎಂದು ವರದಿಯಾಗಿದೆ