ತಿರುವನಂತಪುರ: ಒಲಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ತೋಡಿದ ಭಾರತ ಹಾಕಿ ತಂಡದ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಉದ್ಯಮಿ ಡಾ.ಶಂಷೇರ್ ವಯಾಲಿಲ್ ₹1 ಕೋಟಿ ನಗದು ಬಹುಮಾನ ಪ್ರಕಟಿಸಿದ್ದಾರೆ.
ಭಾರತದ ಹಾಕಿ ಪುರುಷರ ತಂಡ ಒಲಂಪಿಕ್ಸ್ನಲ್ಲಿ ಕಂಚಿನ ಸಾಧನೆಯಲ್ಲಿ ಮಾಡಿದೆ. ಗೋಲ್ಕೀಪರ್ ಕೇರಳದ ಶ್ರೀಜೇಶ್ ಅವರ ಪಾತ್ರ ಮಹತ್ವದ್ದಾಗಿತ್ತು.
ಭಾರತವು ಕಂಚಿನ ಪದಕ ಜಯಿಸುವಲ್ಲಿ ಶ್ರೀಜೇಶ್, ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ನಾವು ನಗದು ಬಹುಮಾನ ಘೋಷಿಸಿದ್ದೇವೆ ಎಂದು ವಿಪಿಎಸ್ ಹೆಲ್ತ್ಕೇರ್ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶಂಷೇರ್ ಹೇಳಿದ್ದಾರೆ.