ಕಾರವಾರ: ಅಬುದಾಬಿಯಲ್ಲಿ ನಡೆಯುತ್ತಿರುವ ಒಲಂಪಿಕ್ ವರ್ಲ್ಡ್ ಗೇಮ್ 2019ರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಂದೇಶ ಕೃಷ್ಣ ಹರಿಕಂತ್ರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಸೈಬೀರಿಯಾದ ಸ್ಪರ್ಧಿ ವಿರುದ್ಧ 16-12 ಅಂಕದಿಂದ ಗೆಲುವು ದಾಖಲಿಸಿದ್ದಾರೆ. ಇದಕ್ಕೂ ಮೊದಲು ಕ್ವಾಟರ್ ಫೈನಲ್ನಲ್ಲಿ ಸ್ವಿಟ್ಜರ್ಲ್ಯಾಂಡ್ ಹಾಗೂ ಸೆಮಿಫೈನಲ್ನಲ್ಲಿ ಈಜಿಪ್ಟ್ ವಿರುದ್ಧ ಗೆಲುವು ದಾಖಲಿಸಿದ್ದರು.
ಯುವಕ ಸಂದೇಶ ಅವರಿಗೆ ಮಾತನಾಡಲು ಬರುವುದಿಲ್ಲ. ಅಲ್ಲದೆ ಮಂದ ಬುದ್ಧಿಯಿಂದ ಬಳಲುತ್ತಿರುವ ಅವರು ಕುಮಟಾದ ದಯಾನಿಲಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಯಾನಿಲಯ ಶಾಲೆಯ ಸಂಸ್ಥಾಪಕ ಸಿರಿಲ್ ಲೋಪಿಸ್ ಟೇಬಲ್ ಟೆನಿಸ್ ತರಬೇತಿ ನೀಡಿದ್ದಾರೆ.