ಟಿ20 ವಿಶ್ವಕಪ್ನ ಹೈ ವೋಲ್ಟೇಜ್ ಪಂದ್ಯ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಈ ಮಹಾನ್ ಪಂದ್ಯಕ್ಕಾಗಿ ಎರಡೂ ದೇಶಗಳ ಅಭಿಮಾನಿಗಳು ತುಂಬಾ ಕಾತುರರಾಗಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾವನ್ನು ಸೋಲಿಸಲು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ತಮ್ಮ ತಂಡಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಶೋಯೆಬ್ ಪ್ರಕಾರ, ಈ ಸಲಹೆಯನ್ನು ಅನುಸರಿಸುವ ಮೂಲಕ ಪಾಕಿಸ್ತಾನದ ಗೆಲುವು ಸುಲಭವಾಗಲಿದೆ.
ಈ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ತಮ್ಮ ತಂಡಕ್ಕೆ ಅಂತಹ ಮೂರು ಸಲಹೆಗಳನ್ನು ನೀಡಿದ್ದಾರೆ. ಆ ಮೂರು ಸಲಹೆಗಳನ್ನು ಕೇಳಿದರೆ ಎಂತವರೂ ನಗದೆ ಇರಲಾರು. ಶೋಯೆಬ್ ಅಖ್ತರ್ ಸಲಹೆಗಳೆಂದರೆ, ಪಾಕಿಸ್ತಾನ ಅತ್ಯಂತ ಬಲಿಷ್ಠ ತಂಡವಾಗಿರುವುದರಿಂದ ಟೀಂ ಇಂಡಿಯಾದ ಆಟಗಾರರಿಗೆ ನಿದ್ರೆ ಮಾತ್ರೆ ನೀಡಬೇಕು.
ಎರಡನೇ ಸಲಹೆ ಏನೆಂದರೆ ನೀವು ವಿರಾಟ್ ಕೊಹ್ಲಿಯನ್ನು ಇನ್ಸ್ಟಾಗ್ರಾಮ್ ಬಳಸದಂತೆ ತಡೆಯಿರಿ ಏಕೆಂದರೆ ಅವರು ಅಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅದೇ ಸಮಯದಲ್ಲಿ, ಅತ್ಯಂತ ಮುಖ್ಯವಾದ ಮೂರನೇ ಸಲಹೆಯಂತೆ, ಟೀಮ್ ಇಂಡಿಯಾದ ಆಪ್ತ ಸಲಹೆಗಾರ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡಲು ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಅವರು ತಮ್ಮ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಪಾಕಿಸ್ತಾನದ ಆಟಗಾರರು ಕೇವಲ ಧೋನಿ ಮೈದಾನದಲ್ಲಿ ಬ್ಯಾಟಿಂಗ್ ಮಾಡಲು ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಏಕೆಂದರೆ ಅವರು ಇನ್ನೂ ಅತ್ಯಂತ ಫಾರ್ಮ್ ಬ್ಯಾಟ್ಸ್ಮನ್ ಆಗಿದ್ದಾರೆ ಎಂದು ಅಖ್ತರ್, ಧೋನಿಯನ್ನು ಹೊಗಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಕೆಣಕ್ಕಿದ ಶೋಯಿಬ್ ಅಖ್ತರ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಲ್ಲದೇ ನಾಯಕರ ಅದೃಷ್ಟದ ವಿಚಾರಕ್ಕೆ ಬಂದರೆ ಅದರಲ್ಲಿ ಬಾಬರ್ ಅಜಮ್, ಕೊಹ್ಲಿಗಿಂತ ಮುಂದಿರುವ ಕಾರಣ ಪಾಕಿಸ್ತಾನದ ಮೇಲುಗೈ ಇದೆ ಎಂದೂ ಅಖ್ತರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ನನಗೆ ಬೇಸರವಾಗಿದೆ, ಅವರು ಟೀಮ್ ಇಂಡಿಯಾಕ್ಕೆ ಅದೃಷ್ಟದ ನಾಯಕರಾಗಿಲ್ಲ, ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ನಿಕಟ ಸ್ಪರ್ಧೆ ಇರುತ್ತದೆ. ಇಬ್ಬರು ಅತ್ಯುತ್ತಮ ನಾಯಕರು ಮತ್ತು ಇಬ್ಬರು ಅತ್ಯುತ್ತಮ ಬ್ಯಾಟ್ಸ್ಮನ್ಗಳು ತಮ್ಮ ತಂಡಗಳನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.