ಹೊಸದಿಲ್ಲಿ: ಮಳೆಯಿಂದ ಜನರಿಗಾಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಸಂಬಂಧಪಟ್ಟವರು ವಿಫಲವಾದ ಹಿನ್ನೆಲೆಯಲ್ಲಿ ದೆಹಲಿ ಜನ ಈ ಬಾರಿ ಎರಡು ದೋಣಿ ಕೊಂಡುಕೊಳ್ಳುವ ಕಾಲ ಬಂದಿದೆ ಎಂದು ಕ್ರಿಕೆಟ್ ತಂಡದ ಆಟಗಾರ ಗೌತಮ್ ಗಂಭೀರ್ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ನಿರಂತರವಾಗಿ. ಸುರಿದ ಮಳೆಯಿಂದಾಗಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ ಗೌತಮ್ ಗಂಭೀರ್, ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಆರೋಪಿಸಿದ್ದಾರೆ. ಗಂಭೀರ್ ಟ್ವೀಟ್ ಗೆ ಪ್ರತ್ಯುತ್ತರ ನೀಡಿದ ಸೆಹ್ವಾಗ್ ಒಳ್ಳೆಯ ಉಪಾಯ. ನೀನು ಎರಡು ದೋಣಿಗಳನ್ನು ಖರೀದಿ ಮಾಡು. ಅದರಲ್ಲಿ ಒಂದಕ್ಕೆ ಸಮ ಮತ್ತೊಂದಕ್ಕೆ ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಇರುತ್ತವೆ’ ಎಂದು ಟ್ವೀಟ್ ಮಾಡುವ ಮೂಲಕ ದೆಹಲಿ ಸರ್ಕಾರದ ಸಮ-ಬೆಸ ಯೋಜನೆಯನ್ನು ಟೀಕಿಸಿದ್ದಾರೆ.
ದೆಹಲಿ ಸರ್ಕಾರವನ್ನು ಟೀಕಿಸಿದ ಗಂಭೀರ್-ಸೆಹ್ವಾಗ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.