ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ವಿಶ್ವಕಪ್ ಪಂದ್ಯಾಟದ ವೇಳೆ ಪತ್ರಕರ್ತ ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ್ದ ನಾಯಕಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದ ವ್ಯಕ್ತಿಗೆ ಸರಿಯಾಗಿ ಬೆಂಡೆತ್ತಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಿಥಾಲಿ ರಾಜ್ ನಂತರ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ ಇತರರ ಜತೆ ಸೇರಿ ಕ್ಲಿಕ್ಕಿಸಿದ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
ಈ ಚಿತ್ರದಲ್ಲಿ ಮಿಥಾಲಿ ಬೆವರಿದ್ದನ್ನು ಉಲ್ಲೇಖಿಸಿ ವ್ಯಕ್ತಿಯೊಬ್ಬ ‘ಅಶಿಮ್ ದಾಸ್ ಚೌಧರಿ’(ನೀವು ಕೆಟ್ಟದಾಗಿ ಕಾಣಿಸುತ್ತಿದ್ದೀರಿ) ಎಂದು ಟ್ವೀಟ್ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಮಿಥಾಲಿ “ಮೈದಾನದಲ್ಲಿ ಸಾಕಷ್ಟು ಬೆವರಿಳಿಸಿಕೊಂಡಿದ್ದರಿಂದಲೇ ನಾನು ಇಂದು ಇಲ್ಲಿದ್ದೀನಿ. ಇದಕ್ಕಾಗಿ ನಾನು ನಾಚಿಕೆ ಪಡುವುದಿಲ್ಲ’ ಎಂದು ಆ ವ್ಯಕ್ತಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇದನ್ನು ಗಮನಿಸಿದ ಮಿಥಾಲಿ ಅಭಿಮಾನಿಗಳು ಆ ವ್ಯಕ್ತಿಗೆ ಸರಿಯಾಗಿ ಟ್ವಿಟರ್ ನಲ್ಲಿ ಬೆಂಡೆತ್ತಿದ್ದಾರೆ.