ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಕೊನೇ ಎಸೆತದಲ್ಲಿ ಕಳೆದುಕೊಂಡಿರುವುದು ತುಂಬಾ ನೋವಿನ ವಿಚಾರ ಎಂದು ಭಾರತ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ತಿಳಿಸಿದರು.
ಭಾನುವಾರ ಲಕ್ನೋದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಆರು ವಿಕೆಟ್ ಗಳಿಂದ ಭಾರತವನ್ನು ಪರಾಭವಗೊಳಿಸಿತ್ತು.
ಮೊದಲ ಟಿ-20 ಪಂದ್ಯ ಕಳೆದುಕೊಂಡಿದ್ದ ಮಹಿಳಾ ತಂಡವು ಎರಡನೇ ಟಿ-20 ಪಂದ್ಯವನ್ನು ಗೆದ್ದುಕೊಂಡು ಸರಣಿ ಸಮಬಲ ಸಾಧಿಸಬೇಕಾಗಿತ್ತು. ಆದರೆ ದಕ್ಷಿಣ ಆಫ್ರಿಕಾದ ಮಹಿಳೆಯರು 12 ಎಸೆತಗಳಲ್ಲಿ 19 ರನ್ ಮಾಡಿ ಗೆಲುವಿಗೆ ಬೇಕಿದ್ದ 159 ರನ್ ಗಳನ್ನು ಪೂರೈಸಿದರು.