ಹೊಸದಿಲ್ಲಿ: ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2021/22ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ತಮಿಳುನಾಡು ತಂಡ, ಕರ್ನಾಟಕ ವಿರುದ್ಧ 4 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಬಾರಿ ದೇಶಿ ಟಿ20 ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ನೀಡಿದ್ದ 152 ರನ್ ಗುರಿ ಹಿಂಬಾಲಿಸಿದ್ದ ತಮಿಳುನಾಡು ತಂಡ ಉತ್ತಮ ಆರಂಭ ಪಡೆದಿತ್ತಾದರೂ ಮಧ್ಯಮ ಓವರ್ಗಳಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ಅದರಂತೆ ಕೊನೆಯ ಎರಡು ಓವರ್ಗಳಿಗೆ ಗೆಲ್ಲಲು ತಮಿಳುನಾಡಿಗೆ 30 ರನ್ ಅಗತ್ಯವಿತ್ತು. ಆದರೆ, 19ನೇ ಓವರ್ನಲ್ಲಿ ಶಾರೂಖ್ ಖಾನ್ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ಆ ಮೂಲಕ ಕೊನೆಯ ಓವರ್ನಲ್ಲಿ ತಮಿಳುನಾಡು ತಂಡಕ್ಕೆ 16 ರನ್ ಅಗತ್ಯವಿತ್ತು.
20ನೇ ಓವರ್ ಮೊದಲನೇ ಎಸೆತದಲ್ಲಿಯೇ ಸಾಯಿ ಕಿಶೋರ್ ಬೌಂಡರಿ ಸಿಡಿಸಿದರು. ಅಂತಿಮ ಎರಡು ಎಸೆತಗಳಲ್ಲಿ 8 ರನ್ ಅಗತ್ಯವಿದ್ದಾಗ ಪ್ರತೀಕ್ ಜೈನ್ ಯಾರ್ಕರ್ ಹಾಕುವ ಭರದಲ್ಲಿ ವೈಡ್ ಎಸೆದರು. 5ನೇ ಎಸೆತದಲ್ಲಿ ಶಾರೂಖ್ ಎರಡು ರನ್ ಪಡೆದುಕೊಂಡರು. ನಂತರ ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿದ್ದಾಗ ಶಾರೂಖ್ ಖಾನ್ ಸ್ಕೈರ್ ಲೆಗ್ ಸೈಡ್ಗೆ ಭರ್ಜರಿ ಸಿಕ್ಸರ್ ಸಿಡಿಸಿ ತಮಿಳುನಾಡು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.