News Karnataka Kannada
Friday, May 17 2024
ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಅಂಬಾಟಿ ರಾಯುಡು

Photo Credit :

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಅಂಬಾಟಿ ರಾಯುಡು

ಮುಂಬಯಿ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಅಂಬಾಟಿ ರಾಯುಡು ಅವರು ಸ್ಥಾನ ಸಿಗದೆ ನಿರಾಶೆಗೊಂಡು ಬುಧವಾರ ಎಲ್ಲಾ ಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಈ ಬಗ್ಗೆ ಅಂಬಾಟಿ ರಾಯುಡು ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಪತ್ರ ಕೂಡ ಕಳುಹಿಸಿದ್ದಾರೆ.

ಶಿಖರ್ ಧವನ್ ಮತ್ತು ವಿಜಯ್ ಶಂಕರ್ ಗಾಯಾಳುವಾದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೆ ಇದ್ದ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಗೆ ತಂಡ ಆಯ್ಕೆಯಾದ ವೇಳೆ ರಾಯುಡು ಅವರು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿದ್ದರು.

ರಾಯುಡು ಬಲಗೈ ಬ್ಯಾಟ್ಸ್ ಮೆನ್ ಹಾಗೂ ಆಫ್ ಬ್ರೇಕ್ ಬೌಲರ್ ಆಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದ ರಾಯುಡು ಅವರು 19ರ ಕೆಳಹರೆಯದ ಭಾರತ ತಂಡದ ನಾಯಕತ್ವ ವಹಿಸಿದ್ದರು. 2004ರಲ್ಲಿ 19ರ ಕೆಳಹರೆಯದ ಭಾರತ ತಂಡ ಸೆಮಿಫೈಲಿಗೇರಿತ್ತು.

2013ರ ಜುಲೈ 24ರಂದು ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. 2019ರ ಮಾರ್ಚ್ 8ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 55 ಪಂದ್ಯಗಳಲ್ಲಿ 1694 ರನ್ ಬಾರಿಸಿದ್ದರು. ಮೂರು ಶತಕ ಹಾಗೂ 10 ಅರ್ಧಶತಕ ಬಾರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು