ವಿಘ್ನ ನಿವಾರಕ ಗಣೇಶನ ಆರಾಧನೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. 2024 ರಲ್ಲಿ, ಗಣೇಶ ಚತುರ್ಥಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಗಣೇಶನಿಗೆ ವಕ್ರತುಂಡ, ಏಕದಂತ, ಸಿದ್ಧಿ ವಿನಾಯಕ, ಗಜಾನನ, ಸೇರಿದಂತೆ ಬಹು ಹೆಸರುಗಳಿವೆ. ಈ ಗಣಪತಿಯನ್ನು ಇಡೀ ದೇಶವೇ ಪೂಜಿಸುತ್ತದೆ.

ಈ ಬಾರಿ 7 ಸೆಪ್ಟೆಂಬರ್‌ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ತಿಥಿ ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗುತ್ತದೆ. ಆ ದಿನ ಮಧ್ಯಾಹ್ನ 3:00 ರಿಂದ 1:00 ರವರೆಗೆ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 7 ಸಂಜೆ 5:37 ಕ್ಕೆ ಗಣೇಶ ಚತುರ್ಥಿ ಪೂಜೆ ಕೊನೆಗೊಳ್ಳುತ್ತದೆ

ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಪೂಜೆ ತಿಥಿ ಬೆಳಗ್ಗೆ 11:03 ರಿಂದ ಪ್ರಾರಂಭವಾಗಿ 1.34 ನಿಮಿಷಕ್ಕೆ ಪೂಜೆ ಮುಕ್ತಾಯವಾಗಲಿದೆ. ಗಣೇಶ ಚತುರ್ಥಿಯ ಪೂಜಾ ಹಂತವು 10 ದಿನಗಳವರೆಗೆ ಇರುತ್ತದೆ. ಕೊನೆಗೆ ಅನಂತ ಚತುರ್ದಶಿಯಂದು ಪೂಜೆ ಮುಗಿಯುತ್ತದೆ. 2024 ರ ಗಣೇಶ ಚತುರ್ಥಿ ಸೆಪ್ಟೆಂಬರ್ 17 ರಂದು ಕೊನೆಗೊಳ್ಳುತ್ತದೆ.

ಇನ್ನು ಮುಖ್ಯವಾಗಿ ಗಣಪ್ಪನ ವಿಗ್ರಹವನ್ನು ಪ್ರತಿಷ್ಠಾಪನೆಗಾಗಿ ಮನೆಗೆ ತರುವಂತಿದ್ದರೆ ಅದಕ್ಕೆ ಸರಿಯಾದ ಸಮಯ ಯಾವುದು ಎಂದು ತಿಳಿದಿರುವುದು ಬಹಳ ಮುಖ್ಯ. ನೀವು ಬಪ್ಪನ ವಿಗ್ರಹವನ್ನು ಸೆಪ್ಟೆಂಬರ್ 7 ರಂದು ಮಧ್ಯಾಹ್ನದಿಂದ ನಿಮ್ಮ ಮನೆಗಳಿಗೆ ತರಬಹುದು. ಇದರ ಶುಭ ಯೋಗವು ಬೆಳಿಗ್ಗೆ 11:03 ರಿಂದ ಪ್ರಾರಂಭವಾಗಿ ಮಧ್ಯಾಹ್ನ 01:34 ರವರೆಗೆ ಮುಂದುವರಿಯುತ್ತದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮತ್ತು ಶುದ್ಧವಾದ ಉಡುಪನ್ನು ಧರಿಸಿ ಶುದ್ಧತೆ ಮತ್ತು ಭಕ್ತಿಯಿಂದ ದಿನವನ್ನು ಪ್ರಾರಂಭಿಸಬೇಕು. ಕೆಂಪು ಅಥವಾ ಹಳದಿ ಬಟ್ಟೆಯಿಂದ ಅಲಂಕರಿಸಿದ ವೇದಿಕೆ ಮೇಲೆ ವಿಗ್ರಹವನ್ನು ಇರಿಸಿ. ವಿಗ್ರಹದ ಸುತ್ತಮುತ್ತಲು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿ, “ಓಂ ಗನ್ ಗಣಪತಯೇ ನಮಃ” ಮಂತ್ರದ ಪಠಣದೊಂದಿಗೆ ಪೂಜೆ ಪ್ರಾರಂಭಿಸಿ. ಭಗವಾನ್ ಗಣೇಶ, ನಂಬಿಕೆಯ ಪ್ರಕಾರ, ವಿಘ್ನಹರ್ತಾ ಅಥವಾ ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದು ಹೇಳಲಾಗುತ್ತದೆ. ಹಾಗಾಗಿ ಗಣೇಶನನ್ನ ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ.