ಹಲವು ವಿಶೇಷಗಳ ವಿಶ್ವದ ಅತಿದೊಡ್ಡ ದೇವಾಲಯ ಬಿಹಾರದಲ್ಲಿ ನಿರ್ಮಾಣ

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಜೂನ್ 20 ರಿಂದ ವಿಶ್ವದ “ಅತಿದೊಡ್ಡ” ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಧಾರ್ಮಿಕ ಸಂಘಟನೆಯೊಂದರ ಪದಾಧಿಕಾರಿ ಸೋಮವಾರ ತಿಳಿಸಿದ್ದಾರೆ.

ವಿರಾಟ್ ರಾಮಾಯಣ ದೇವಾಲಯವನ್ನು ಕೈತ್ವಾಲಿಯಾ-ಬಹುರಾ ಪಂಚಾಯತ್‌ನಲ್ಲಿ ಕೆಸರಿಯಾ-ಚಾಕಿಯಾ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾಗುವುದು ಮತ್ತು ಅದರ ಗಾತ್ರವು ಅಯೋಧ್ಯೆಯ ನಿರ್ಮಾಣ ಹಂತದಲ್ಲಿರುವ ರಾಮ್ ಲಾಲಾ ದೇವಾಲಯಕ್ಕಿಂತ ದೊಡ್ಡದಾಗಿದೆ ಎಂದು ಶ್ರೀ ಮಹಾವೀರ ಆಸ್ಥಾನ ನ್ಯಾಸ ಸಮಿತಿ ಅಧ್ಯಕ್ಷ ಆಚಾರ್ಯ ಕಿಶೋರ್ ಕುನಾಲ್ ಹೇಳಿದ್ದಾರೆ.

“ಈ ದೇವಾಲಯವು 3.67 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿರಲಿದೆ ಮತ್ತು ಮುಖ್ಯ ರಚನೆಯ ಎತ್ತರ 270 ಅಡಿಗಳಾಗಿರುತ್ತದೆ. ಇನ್ನೊಂದು ರಚನೆಯ ಎತ್ತರವು 198 ಅಡಿ ಆಗಿರುತ್ತದೆ ಮತ್ತು ನಾಲ್ಕು ಇತರ ರಚನೆಯ ಸಹ ದೇವಾಲಯಗಳು 180 ಅಡಿ ಎತ್ತರವಿದೆ. ಒಂದು ರಚನೆ. 135 ಅಡಿ ಎತ್ತರವಿದ್ದರೆ ಉಳಿದ ನಾಲ್ಕು 108 ಅಡಿ ಎತ್ತರವಿದ್ದು, ವಿರಾಟ್ ರಾಮಾಯಣ ಮಂದಿರವು 280 ಅಡಿ ಉದ್ದ ಮತ್ತು 540 ಅಡಿ ಅಗಲವಿದೆ ಎಂದು ಅವರು ಹೇಳಿದರು. ಅಯೋಧ್ಯೆಯ ದೇವಾಲಯ ಉದ್ದ 360 ಅಡಿ ಉದ್ದ ಮತ್ತು 235 ಅಡಿ ಅಗಲವಿದೆ. ಅಯೋಧ್ಯೆಯ ರಾಮ್ ಲಾಲಾ ದೇವಾಲಯದ ಅತಿ ಎತ್ತರದ ರಚನೆಯು 135 ಅಡಿಗಳಷ್ಟಿದೆ. “ವಿರಾಟ್ ರಾಮಾಯಣ ದೇವಾಲಯದಲ್ಲಿ, ಶೈವ ಮತ್ತು ವೈಷ್ಣವ ದೇವರು ಮತ್ತು ದೇವತೆಗಳಿಗೆ ಸೇರಿದ 22 ದೇವಾಲಯಗಳು ಆವರಣದೊಳಗೆ ಇರುತ್ತವೆ” ಎಂದು ಆಚಾರ್ಯ ಕಿಶೋರ್ ಹೇಳಿದರು. ಈ ವಠಾರದಲ್ಲಿ ಆಶ್ರಮ, ಗುರುಕುಲ, ಧರ್ಮಶಾಲಾ ಮತ್ತು ಇತರ ಸೌಲಭ್ಯಗಳನ್ನು ಒಳಗೊಂಡಿರುತ್ತದೆ” ಎಂದು ಅವರು ಹೇಳಿದರು.

“ನಾವು ಈ ದೇವಾಲಯವನ್ನು ಬಹಳ ಹಿಂದೆಯೇ ನಿರ್ಮಿಸಲು ಉದ್ದೇಶಿಸಿದ್ದೆವು ಅದಕ್ಕೆ ವಿರಾಟ್ ಅಂಕೋರ್ವಾತ್ ದೇವಾಲಯ ಎಂದು ಹೆಸರಿಸಿದ್ದೆವು. ಆದರೆ ಕಾಂಬೋಡಿಯಾ ಸರ್ಕಾರವು 2012 ರಲ್ಲಿ ಈ ಹೆಸರಿನ ಬಗ್ಗೆ ಆಕ್ಷೇಪಿಸಿ. ಆದ್ದರಿಂದ ಇದರ ನಿರ್ಮಾಣವನ್ನು 10 ವರ್ಷಗಳ ಕಾಲ ಮುಂದೂಡಲಾಯಿತು. ನಾವು ಆ ಸಮಯದಲ್ಲಿ ಭೂಮಿಪೂಜೆಯನ್ನು ಮಾಡಿದ್ದೆವು. ಆದರೆ ನಿರ್ಮಾಣ ಪ್ರಾರಂಭವಾಗಿರಲಿಲ್ಲ. ಈಗಎಲ್ಲವೂ ಸುಸೂತ್ರವಾಗಿದ್ದು, 2025 ರ ಅಂತ್ಯದವರೆಗೆ ನಿರ್ಮಾಣ ಪೂರ್ಣಗೊಳ್ಳುತ್ತದೆ, ”ಎಂದು ಅವರು ಹೇಳಿದರು.

ಈ ದೇವಾಲಯದಲ್ಲಿ ಶಿವಲಿಂಗ ಮತ್ತು ಸಹಸ್ತ್ರ ಶಿವಲಿಂಗವನ್ನು ನಿರ್ಮಿಸಲು 250 ಟನ್ ಮಹಾಬಲಿಪುರಂ ಗ್ರಾನೈಟ್ ಅನ್ನು ಬಳಸಲಾಗುವುದು ಎಂದು ಆಚಾರ್ಯ ಕಿಶೋರ್ ಕುನಾಲ್ ಹೇಳಿದ್ದಾರೆ.

Gayathri SG

Recent Posts

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

9 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

31 mins ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

43 mins ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

55 mins ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

2 hours ago

ಇಂದು ಕೊಡಗು,ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮೇ 9ರಂದು ಬಿರುಗಾಳಿಯೊಂದಿಗೆ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ…

2 hours ago