ಪೈಲಟ್‌ ಹುದ್ದೆಗೇರಿದ ಮಂಗಳೂರಿನ ಮುಸ್ಲಿಂ ಯುವತಿ: ಸಾಧನೆಗೆ ಮೆಚ್ಚುಗೆ

ಮಂಗಳೂರು: ಮಂಗಳೂರು ಮೂಲದ 21 ವರ್ಷದ ಮುಸ್ಲಿಂ ಯುವತಿಯೊಬ್ಬಳು ವಿಮಾನ ಚಲಾಯಿಸುವ ಪೈಲಟ್ ಹುದ್ದೆಗೇರಿ ಹುಬ್ಬೇರಿಸಿದ್ದಾಳೆ, ಪಾಂಡೇಶ್ವರ ನಿವಾಸಿ ಹನಿಯಾ ಹನೀಫ್ ಈ ಸಾಧನೆ ಮಾಡಿದ ಯುವತಿ.

ಪಾಂಡೇಶ್ವರದ ಮಹಮ್ಮದ್ ಹನೀಫ್ ಮತ್ತು ನಜಿಯಾ ದಂಪತಿ ಪುತ್ರಿಯಾಗಿರುವ ಹನಿಯಾ ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆದಿದ್ದಾರೆ. ಹನಿಯಾ ಸಣ್ಣದಿರುವಾಗ ದುಬೈನಲ್ಲಿದ್ದು ಒಂಬತ್ತನೇ ಕ್ಲಾಸ್ ವರೆಗೆ ಅಲ್ಲಿನ ಇಂಡಿಯನ್ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದಿದ್ದಳು. ಎಸ್ಸೆಸ್ಸೆಲ್ಸಿ ಶಿಕ್ಷಣವನ್ನು ಮಂಗಳೂರಿನ ಬಿಜೈನ ಲೂರ್ಡ್ ಸೆಂಟ್ರಲ್ ಸ್ಕೂಲ್ ನಲ್ಲಿ ಪೂರೈಸಿದ್ದಳು, ಆನಂತರ, ಮಹೇಶ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದರು.

ಸಣ್ಣವಳಿದ್ದಾಗಿನಿಂದಲು ದುಬೈಗೆ ವಿಮಾನದಲ್ಲಿ ಹೋಗಿ ಬರುತ್ತಿದ್ದರಿಂದ ತಾನೂ ವಿಮಾನ ಚಲಾಯಿಸಬೇಕು, ಪೈಲಟ್ ಆಗಬೇಕೆಂಬ ಕನಸು ಕಂಡಿದ್ದಳು. ಹನಿಯಾಳ ಬಯಕೆಗೆ ಹೆತ್ತವರು ಸ್ಪಂದಿಸಿದ್ದು ಪೈಲಟ್ ಕಲಿಯುವುದಕ್ಕಾಗಿ ಮೈಸೂರಿನ ಓರಿಯಂಟ್ ಫೈಟ್ ಏವಿಯೇಶನ್ ಅಕಾಡೆಮಿಗೆ ಸೇರಿಸಿದ್ದರು. ಪಿಯುಸಿ ಬಳಿಕ ಅಲ್ಲಿ ಮೂರೂವರೆ ವರ್ಷಗಳ ಕಾಲ ಪೈಲಟ್ ತರಬೇತಿ ಪಡೆದಿದ್ದು, ಇತ್ತೀಚೆಗೆ ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆದಿದ್ದಾರೆ, ಸಣ್ಣ ವಯಸ್ಸಿನಲ್ಲೇ 200 ಗಂಟೆಗಳ ವಿಮಾನ ಚಾಲನೆ ಮಾಡಿ, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಸಣ್ಣದಿರುವಾಗಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದರಿಂದ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದ ಪೈಲಟ್ ಆಗುವುದು ನನಗೆ ಸುಲಭದ ದಾರಿಯಾಗಿರಲಿಲ್ಲ. ಮಹಿಳೆಯರನ್ನು ಈ ವೃತ್ತಿಗೆ ಇಳಿಸಲು ಸಾಮಾನ್ಯವಾಗಿ ಹೆತ್ತವರು ಬಿಡುವುದಿಲ್ಲ. ಆದರೆ ನನಗೆ ಹೆತ್ತವರೇ ಪ್ರೋತ್ಸಾಹಿಸಿ, ಅವಕಾಶ ಕೊಟ್ಟರು. ಆಮೂಲಕ ಕಮರ್ಶಿಯಲ್ ಪೈಲಟ್ ಆಗುವಂತಾಯಿತು ಎಂದು ಹನಿಯಾ ಹನೀಫ್ ಹೇಳುತ್ತಾರೆ. ಆಕೆಯ ತಾಯಿ ನಜಿಯಾ ಕೂಡ ಮಗಳು ಪೈಲಟ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಣ್ಣ ಹುಡುಗಿಯಾಗಿದ್ದಾಗಲೇ ಪೈಲಟ್ ಆಗುತ್ತೇನೆಂದು ಹೇಳಿಕೊಂಡಿದ್ದಳು. ಆಕೆಯ ಕನಸು ಈಡೇರಿಸಲು ನಾವು ಬೆಂಬಲ ನೀಡಿದ್ದವು. ಈಗ ಮಗಳು ವಿಮಾನ ಚಲಾಯಿಸುವುದನ್ನು ನೋಡಿ ತುಂಬ ಸಂತಸವಾಗಿದೆ ಎಂದು ಹೇಳಿದ್ದಾರೆ.

Ashika S

Recent Posts

ಮತ್ತೊಂದು ಲವ್ ಜಿಹಾದ್ ಪ್ರಕರಣ: ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ

ಹುಬ್ಬಳ್ಳಿಯಲ್ಲಿ  ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

3 mins ago

ವಕೀಲರ ಸಂಘದ ಅಧ್ಯಕ್ಷರಾಗಿ ಶಿವಶರಣಪ್ಪ ಪಾಟೀಲ ಆಯ್ಕೆ

2024-25ನೇ ಸಾಲಿಗೆ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಶಿವಶರಣಪ್ಪ ಪಾಟೀಲ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

23 mins ago

ಈ ವಾರವೂ ಅನಿಶ್ಚಿತ ಸ್ಥಿತಿಯಲ್ಲಿ ಚಿನ್ನದ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಕಳೆದ ವಾರ ಮಿಶ್ರ ಅನುಭವ ನೀಡಿವೆ. ಒಂದು ವಾರದಲ್ಲಿ ಚಿನ್ನದ…

41 mins ago

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹೃದಯಾಘಾತದಿಂದ ನಿಧನ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ನಿನ್ನೆ  ರಾತ್ರಿ 1.20ಕ್ಕೆ ನಿಧನರಾಗಿದ್ದಾರೆ.

58 mins ago

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

8 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

9 hours ago