ನವದೆಹಲಿ: ತಾಂತ್ರಿಕ ಸಮಸ್ಯೆಯಿಂದಾಗಿ ಟ್ವಿಟರ್ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಳಿಕ ಎಲ್ಲವೂ ಸರಿಯಾಗಿದ್ದು, ಈಗ ಸರಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.ಈ ಅವಧಿಯಲ್ಲಿ ಟ್ವಿಟರ್ ಖಾತೆದಾರರು ಪೋಸ್ಟ್ ಮಾಡುವುದು ಸೇರಿದಂತೆ ಇತರ ಕೆಲಸ ಮಾಡುವಾಗ ತೊಂದರೆ ಅನುಭವಿಸಿದರು.
ಡೌನ್ಡೆಕ್ಟರ್ ವರದಿ ಪ್ರಕಾರ, ಶುಕ್ರವಾರ ಸಂಜೆ ಒಂದು ಗಂಟೆಗಳ ಕಾಲ ಟ್ವಿಟರ್ ಸರಿಯಾಗಿ ಕೆಲಸ ನಿರ್ವಹಿಸಿರಲಿಲ್ಲ.ಪ್ರಪಂಚದಾದ್ಯಂತದ ಟ್ವಿಟ್ಟರ್ ಮಾಧ್ಯಮ ಬಳಕೆದಾರರು ಸಂಕ್ಷಿಪ್ತ ನಿಲುಗಡೆ ಕುರಿತಾಗಿ ದೂರು ನೀಡಿದ್ದಾರೆ.
ಡೌನ್ ಡಿಟೆಕ್ಟರ್ ಪ್ರಕಾರ, ಟ್ವಿಟರ್ ಸರ್ವರ್ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಡೌನ್ ಆಗಿತ್ತು.ಶುಕ್ರವಾರದದಂದು ಭಾರತೀಯ ಕಾಲಮಾನ ರಾತ್ರಿ 10:30 ರ ಸುಮಾರಿಗೆ ಡೌನ್ ಆಗಿರುವ ಕುರಿತಾಗಿ ಮೊದಲು ವರದಿಯಾಗಿದೆ.
ಡೌನ್ಡೆಕ್ಟರ್ ಸುಮಾರು 15,000 ಬಳಕೆದಾರರ ನಿಲುಗಡೆ ವರದಿಗಳನ್ನು ತೋರಿಸಿದೆ. ನಂತರ, ಟ್ವಿಟ್ಟರ್ ಇದು ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ದೋಷಗಳನ್ನು ಅನುಭವಿಸುತ್ತಿದೆ ಮತ್ತು ಪ್ರಸ್ತುತ ಸಮಸ್ಯೆಯನ್ನು ತನಿಖೆ ಮಾಡುತ್ತಿದೆ ಎಂದು ಹೇಳಿಕೆ ನೀಡಿತು.
ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್, ಅಥವಾ API, ಅಪ್ಲಿಕೇಶನ್ ಸಾಫ್ಟ್ವೇರ್ ಅನ್ನು ನಿರ್ಮಿಸಲು ಮತ್ತು ಸಂಯೋಜಿಸಲು ಪ್ರೋಟೋಕಾಲ್ಗಳ ಒಂದು ಸೆಟ್ ಆಗಿದೆ.
ಒಂದು ಗಂಟೆ ಬಳಿಕ ಎಲ್ಲವೂ ಸರಿಯಾಯಿತು ಎಂದು ಡೌನ್ಡೆಕ್ಟರ್ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್, ಆಗಿರುವ ತಾಂತ್ರಿಕ ದೋಷವನ್ನು ನಾವು ಸರಿಪಡಿಸಿದ್ದೇವೆ. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಟ್ವೀಟ್ನಲ್ಲಿ ತಿಳಿಸಿದೆ.
ಹೀಟ್ ಮ್ಯಾಪ್ ಪ್ರಕಾರ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಮೆಕ್ಸಿಕೋ, ಯುಎಸ್ ಮತ್ತು ಭಾರತದಿಂದ (ದೆಹಲಿ, ಮುಂಬೈ ಮತ್ತು ಚೆನ್ನೈ) ಟ್ವಿಟರ್ ಸ್ಥಗಿತದ ವರದಿಯಾಗಿದೆ. ಹೆಚ್ಚಿನ (54 ಪ್ರತಿಶತ) ಸಮಸ್ಯೆಗಳು ವೆಬ್ಸೈಟ್ಗಳಿಂದ ವರದಿಯಾದರೆ, ಶೇ 33 ಪ್ರತಿಶತದಷ್ಟು ದೂರುಗಳು Twitter ಲಾಗಿನ್ಗೆ ಸಂಬಂಧಿಸಿದ್ದಾಗಿವೆ.
ರೆಡ್ಡಿಟ್ನಲ್ಲಿನ ಕೆಲವು ಬಳಕೆದಾರರು ತಮ್ಮ ಟ್ವಿಟರ್ ಖಾತೆಯಿಂದ ಲಾಗ್ ಔಟ್ ಆಗಿದ್ದಾರೆ ಎಂದು ದೂರಿದ್ದಾರೆ, ಆದರೆ ಇತರರು ಟ್ವೀಟ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.
ಸಾಣೂರಿನ ಲೈನ್ ಮ್ಯಾನ್ ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…
ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…
ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…
ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…
ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…