ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ 13 ನೇ ಸಂಸ್ಥಾಪನಾ ದಿನಾಚರಣೆಯನ್ನು ಅಚರಿಸಿಕೊಳ್ಳುತ್ತಿದೆ. ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಎನ್ಐಎ ಪಾತ್ರ ಬಹುಮುಖ್ಯವಾದದ್ದು. ಈ ಸಂದರ್ಭದಲ್ಲಿ ಮಾತನಾಡಿರುವ ಗೃಹಸಚಿವ ಅಮಿತ್ ಶಾ ಎನ್ಐಎ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎನ್ಐಎ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಡುತ್ತಿದೆ ಎಂಬುದನ್ನು ಅವರು ಹೀಗೆ ವಿವರಿಸಿದ್ದಾರೆ.
• ಭಯೋತ್ಪಾದನೆಯ ವಿಷಯದಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಒಂದು ಕಡೆಯಾದರೆ ಭಯೋತ್ಪಾದನೆಯನ್ನು ಬುಡ ಸಮೇತ ನಾಶಪಡಿಸುವುದು ಇನ್ನೊಂದು ಕಡೆ. ಅದನ್ನು ಸಾಧಿಸಲು ನಾವು ಮೊದಲು ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡುವವರನ್ನು ಮಟ್ಟ ಹಾಕಬೇಕು.
• ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ʼಫಂಡಿಂಗ್ʼ ಮಾಡುತ್ತಿದ್ದ ಹಲವು ಪ್ರಕರಣಗಳನ್ನು ಎನ್ಐಎ ದಾಖಲಿಸಿದೆ. ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಲ್ಲಿ ಇವು ಹೆಚ್ಚಿನ ಸಹಾಯ ಮಾಡಿದೆ ಜೊತೆಗೆ ಉಗ್ರರರಿಗೆ ಸುಲಭವಾಗಿ ಹಣ ಸಂದಾಯವಾಗುವುದನ್ನು ತಡೆಯಲಾಗಿದೆ.
• 2020-21 ರಲ್ಲಿ ಭಯೋತ್ಪಾದನಾ ಸಂಘಟನೆಗೆಳಿಗೆ ಸೇರಿದ ಹಲವು ʼಗ್ರೌಂಡ್ ಲೆವೆಲ್ʼ ಕೆಲಸಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಪ್ರಕರಣದಾಖಲಿಸಲಾಗಿದೆ ಮತ್ತು ಅನೇಕ ಸ್ಲೀಪರ್ ಸೆಲ್ಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ.
• ಇದರಿಂದಾಗಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸಾಗಣೆ ಮತ್ತು ಇತರೇ ವಸ್ತುಗಳ ಪೂರೈಕೆಗೆ ಭಾರಿ ಹೊಡೆತವುಂಟಾಗಿದೆ. ಸಾಮಾಜಿಕವಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಹಲವರನ್ನು ಬಂಧಿಸಿ ಕಾನೂನಿಗೆ ಒಪ್ಪಿಸಲಾಗಿದೆ.
• ಇದರ ಜೊತೆಗೆ ಮಾವೋವಾದಿಗಳಿಗೆ ಹಣಸಹಾಯ ಮಾಡುತ್ತಿರುವ ಹಲವು ಪ್ರಕರಣಗಳ ಕುರಿತು ತನಖೆ ನಡೆಸಲಾಗುತ್ತಿದೆ.
• ಇಲ್ಲಿಯವರೆಗ ಉಗ್ರರಿಗೆ ಹಣಸಹಾಯ ಮಾಡುವ ಒಟ್ಟು 105 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 876 ಆರೋಪಿಗಳನ್ನು ಒಳಗೊಂಡ 94 ಪ್ರಕರಣಗಳ ಚಾರ್ಜ್ಶೀಟ್ ಮಾಡಲಾಗಿದೆ. ಸುಮಾರು 100 ಆರೋಪಿಗಳಿಗೆ ಶಿಕ್ಷೆಯಾಗಿದೆ.
• ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು ಮಾದಕ ವಸ್ತುಗಳ ಸಾಗಣೆ, ನಕಲಿನೋಟು ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಹವಾಲಾ ದಂಧೆ,ಬಾಂಬ್ ಸ್ಫೋಟ ಗಳಂತಹ ವಿಷಯಗಳ ಕುರಿತಾಗಿ ಡೇಟಾ ಬೇಸ್ ನಿರ್ಮಿಸಲಾಗುತ್ತಿದೆ.
• ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸಿ ಈ ಡೇಟಾಬೇಸ್ ಅನ್ನು ಇನ್ನಷ್ಟು ಬಲಪಡಿಸಿ ದೇಶದ ಅಂತರಿಕ ಸುರಕ್ಷತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ.
• ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಸೇರಿಸಿಕೊಳ್ಳುತ್ತಿರುವ ಕುರಿತು ನಿಗಾವಹಿಸಲಾಗುತ್ತಿದೆ.
• ಸಂಸ್ಥೆಯು ಪ್ರಾರಂಭವಾದಾಗಿನಿಂದ ಸುಮಾರು 400 ಪ್ರಕರಣಗಳನ್ನು ದಾಖಲಿಸಿದೆ. 349 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2,494 ಜನರನ್ನು ಬಂಧಿಸಲಾಗಿದೆ, ಅದರಲ್ಲಿ 391 ಜನರನ್ನು ಅಪರಾಧಿಗಳೆಂದು ಗುರುತಿಸಲಾಗಿದೆ.
ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…
ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…
ಸೋದರಿಯ ಮದುವೆ ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಸಹೋದರಿಗೆ ಹೃದಯಾಘಾತ ಸಂಭವಿಸಿದ ಘಟನೆ ಮೀರತ್ನಲ್ಲಿ ನಡೆದಿದೆ. ರಿಂಷಾ (18)…
ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರ ಗೆಲುವಿಗಾಗಿ ನಾವು, ಬೆಲ್ದಾಳೆಯವರು ಒಂದಾಗಿದ್ದೇವೆ ಎಂದು ಮಾಜಿ…
ಬಣಕಲ್ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಬಾವಾ(87) ತೀವೃ ಹೃದಯಾಘಾತದಿಂದ ಬಣಕಲ್ ನಲ್ಲಿ ನಿಧನರಾದರು. ಅಹ್ಮದ್ ಭಾವಾರವರು ಹಿರಿಯ ಕಾಂಗ್ರೆಸ್…
ಇಂಡಿಗನತ್ತ ಗ್ರಾಮದಲ್ಲಿ ಮರುಚುನಾವಣೆ ಮುಕ್ತಾಯಗೊಂಡಿದ್ದು 528 ರಲ್ಲಿ 71 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.