ಮೈಸೂರು: ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಾಕಾನೆಗಳಿಗೆ ಮಜ್ಜನ ಮಾಡಲಾಗಿದೆ. ನಿರಂತರವಾಗಿ ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಆನೆಗಳು ರಿಲ್ಯಾಕ್ಸ್ ಆಗಿವೆ.

ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲ್ಲೂಕಿನ ನುಗು ಜಲಾಶಯದ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸಿ ಕೆಲಕಾಲ ವಿಶ್ರಾಂತಿ ನೀಡಲಾಗಿದೆ. ಸಾಕಾನೆಗಳಾದ ಮಹೇಂದ್ರ, ಭೀಮಾ, ಶ್ರೀಕಂಠ, ಸುಗ್ರೀವ, ಪ್ರಶಾಂತ ಆನೆಗಳು ನುಗು ಜಲಾಶಯದಲ್ಲಿ ಮಿಂದೆದ್ದಿವೆ.

ಆನೆಗಳ ಸ್ನಾನದ ದೃಶ್ಯ ಸಾಗರ್ ಸುರೇಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸರಗೂರು, ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಹುಲಿ ಹಾವಳಿಯಿಂದಾಗಿ ಕೆಲವು ದಿನಗಳಿಂದ ಕೂಂಬಿಂಗ್ ನಡೆಯುತ್ತಿದೆ. ವನಸಿರಿಯಲ್ಲಿ ಗಜಪಡೆ ಕಂಗೊಳಿಸಿದೆ.