ಮಂಗಳೂರು : ಕೇಂದ್ರ ಸರಕಾರ ಕಡೆಗೂ ಜನಸಾಮಾನ್ಯರಿಗೆ ಭಾರವಾಗಿದ್ದ ಜಿಎಸ್ಟಿ ಹೊರೆಯನ್ನು ಇಳಿಸುವ ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ತೆರಿಗೆ ಹೊರೆ ಇಳಿಸುವ ಬದಲು ಮತ್ತೆ ಬರೆ ಎಳೆಯುವ ಮುನ್ಸೂಚನೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವಾ ದರವನ್ನೂ ಹೆಚ್ಚಿಸಿ ಶಾಕ್ ನೀಡಿದೆ.
ಕೇಂದ್ರ ಸರಕಾರ ಕಡೆಗೂ ಜನಸಾಮಾನ್ಯರಿಗೆ ಭಾರವಾಗಿದ್ದ ಜಿಎಸ್ಪಿ ಹೊರೆಯನ್ನು ಇಳಿಸುವ ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ತೆರಿಗೆ ಹೊರೆ ಇಳಿಸುವ ಬದಲು ಮತ್ತೆ ಬರೆ ಎಳೆಯುವ ಮುನ್ಸೂಚನೆ ನೀಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವಾ ದರವನ್ನೂ ಹೆಚ್ಚಿಸಿ ಶಾಕ್ ನೀಡಿದೆ.
ಕರಾವಳಿಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆಗಳ ದರವನ್ನು ದುಪ್ಪಟ್ಟು ಮಾಡಲಾಗಿದೆ. ಅಕ್ಟೋಬರ್ 1ರಿಂದ ಸೇವಾ ದರವು ಪರಿಷ್ಕೃತವಾಗಲಿದೆ ಎಂದು ಕಟೀಲು ದೇವಸ್ಥಾನ ಮುಂಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಪಟ್ಟಿಯನ್ನು ನೋಡಿದರೆ ಒಂದೊಂದು ದರವನ್ನೂ ದುಪ್ಪಟ್ಟು ಮಾಡಿರುವುದು ಕಂಡುಬರುತ್ತದೆ.
120 ರೂ. ಇದ್ದ ಹೂವಿನ ಪೂಜೆಗೆ 220 ರೂ. ಮಾಡಿದ್ದಾರೆ. ದುರ್ಗಾ ನಮಸ್ಕಾರಕ್ಕೆ 60 ರೂ. ಇದ್ದುದನ್ನು 140 ಮಾಡಲಾಗಿದೆ. ಪಂಚ ಕಜ್ಜಾಯ 20 ರೂ.ನಿಂದ 40 ರೂ. ಮಾಡಲಾಗಿದೆ. ಸರ್ವ ಸೇವೆ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಮಾಡಲಾಗಿದೆ. ರಂಗಪೂಜೆ ಸೇವೆಯನ್ನು 3 ಸಾವಿರ ರೂ.ನಿಂದ ಆರು ಸಾವಿರಕ್ಕೆ ಹೆಚ್ಚಿಸಲಾಗಿದೆ. ನಾಮಕರಣ ಚೀಟಿಗೆ 40 ರೂ. ಇದ್ದುದನ್ನು 200 ರೂ.ಗೆ ಹೆಚ್ಚಿಸಲಾಗಿದೆ. ಲಡ್ಡು ಪ್ರಸಾದ 20ರಿಂದ 60 ರೂ.ಗೆ ಹೆಚ್ಚಿಸಲಾಗಿದೆ.
ಏಕಾಏಕಿ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಸೇವಾ ದರಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಜಾಲತಾಣದಲ್ಲಿ ಟೀಕೆ ಮಾಡಿದೆ. ಸಿದ್ದರಾಮಯ್ಯ ಸರಕಾರದ ಬೆಲೆ ಏರಿಕೆ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ. ಸರ್ಕಾರದ ಖಜಾನೆ ತುಂಬಿಸಲು ಹಿಂದು ದೇವಸ್ಥಾನಗಳಲ್ಲಿ ಬರೆ ಹಾಕಲಾಗಿದೆ ಎಂದು ಟೀಕಿಸಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದೆ.

