ಮಂಗಳೂರು : ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ) ಇದರ 7ನೇ ವರ್ಷದ ಶಾಲಾ ಮಕ್ಕಳ ಉಚಿತ ಪುಸ್ತಕ ವಿತರಣಾ ಸಮಾರಂಭ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಕುಳಾಯಿ ಶನಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಬಲ ಪೂಜಾರಿ ಕಡಂಬೋಡಿ, ಡಾ। ಭರತ್ ವೈ. ಶೆಟ್ಟಿ, ಮಾನ್ಯ ಶಾಸಕರು, ಮಂಗಳೂರು ಉತ್ತರ , ಶ್ರೀ ಸತೀಶ್ ಮುಂಚೂರು, ಜಿಲ್ಲಾ ಬಿ.ಜೆ.ಪಿ. ಕಾರ್ಯಕಾರಿ ಸದಸ್ಯರು ,ಅರ್ಜುನ್ ಭಂಡಾರ್ಕರ್ ಗೋಪಾಲ್ ವಿ., ಮುಖ್ಯೋಪಾಧ್ಯಾಯರು, ವೆಂಕಟ್ರಮಣ ಹಿ.ಪ್ರಾಶಾಲೆ, ಕುಳಾಯಿ ಮತ್ತಿತರರು ಉಪಸ್ಥಿತರಿದ್ದು ದೀಪ ಬೆಳಗಿಸಿ ಉದ್ಘಾಟಿಸಿಲಾಯಿತು.
ಬಳಿಕ ಸೇವ್ ಚಾರಿಟೇಬಲ್ ಲೈಫ್ ನ ,ಅರ್ಜುನ್ ಭಂಡಾರ್ಕರ್ನ್ನು ಈ ಸಂದರ್ಭದಲ್ಲಿ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ವತಿಯೆಂದ ಸನ್ಮಾನಿಸಲಾಯಿತ್ತು .ಬಳಿಕ ನೆರೆದ ಅತಿಥಿಗಳು ಮಕ್ಕಳಿಗೆ ಉಚಿತ ಪುಸ್ತಕವನ್ನ ವಿತರಿಸಲಾಯಿತು.

