ಮಂಗಳೂರು: ಮಕ್ಕಳ ದಿನಾಚರಣೆಯಂದು ಆರಂಭವಾದ ಒಂದು ತಿಂಗಳ ದೀರ್ಘವಾದ ‘ಕನೆಕ್ಟೆಡ್ ವಿಜ್ಡಮ್’ ಕಾರ್ಯಕ್ರಮವು ವಿಜ್ಞಾನ, ಸಾಹಿತ್ಯ ಮತ್ತು ಪರಂಪರೆಯ ಸಂಭ್ರಮದೊಂದಿಗೆ ಸಮಾರೋಪದ ಹಂತಕ್ಕೆ ತಲುಪಿದೆ.
ಈ ಕಾರ್ಯಕ್ರಮದ ಮೂಲಕ ELC ಮತ್ತು CFAL ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಅರ್ಥಪೂರ್ಣ ಸಂವಾದಗಳಲ್ಲಿ ಭಾಗವಹಿಸುವ ಅವಕಾಶ ಪಡೆದರು. ಸಂವಹನಾತ್ಮಕ ಸತ್ರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ನೈಜ ಜಗತ್ತಿನ ಅರಿವು ಬೆಳೆದಿದೆ.
ಈ ಸಮಾರೋಪ ವಾರದಲ್ಲಿ ಖ್ಯಾತ ಲೇಖಕಿ, ಹಿರಿಯ ಐಎಎಸ್ ಅಧಿಕಾರಿ, ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞರು ಹಾಗೂ ಇಂಡಿಯನ್ ಮೊಂಟೆಸ್ಸರಿ ಟ್ರೈನಿಂಗ್ ಸೆಂಟರ್ (IMTC) ನಿರ್ದೇಶಕರೊಂದಿಗೆ ಸಂವಾದಗಳು ನಡೆಯಲಿವೆ. ಡಿಸೆಂಬರ್ 18 ರಂದು CFAL ಕ್ಯಾಂಪಸ್ನಲ್ಲಿ ನಡೆದ ಉಚಿತ ಅಧಿವೇಶನದೊಂದಿಗೆ ಸಮಾರೋಪ ವಾರಕ್ಕೆ ಚಾಲನೆ ದೊರೆಯಿತು. ಈ ಅಧಿವೇಶನದಲ್ಲಿ ಖಗೋಳ ಭೌತಶಾಸ್ತ್ರಜ್ಞರು ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್ನ ಮಾಜಿ ಪ್ರಾಧ್ಯಾಪಕರಾದ ಡಾ.ಪ್ರಜ್ವಲ್ ಶಾಸ್ತ್ರಿ ಭಾಗವಹಿಸಿದ್ದರು. CFAL ಆಸ್ಟ್ರೋ ಕ್ಲಬ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗುರು, ಶನಿ ಹಾಗೂ ಮೆಸ್ಸಿಯರ್ 2 ಗ್ಲೋಬ್ಯುಲರ್ ಕ್ಲಸ್ಟರ್ ವೀಕ್ಷಣೆಗೆ ಲಭ್ಯವಾಯಿತು.
ಡಿಸೆಂಬರ್ 20 ರಂದು ಸಂಜೆ 6:30ಕ್ಕೆ TLC ಕಾಫೆಯಲ್ಲಿ ಭಾರತದ ಅತ್ಯಂತ ಜನಪ್ರಿಯಮಕ್ಕಳ ಲೇಖಕಿಯರಲ್ಲಿ ಒಬ್ಬರಾದ ರೂಪಾ ಪೈ ಅವರ ಪುಸ್ತಕ ಸಹಿ ಮತ್ತು ಓದುಗರ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಂಪ್ಯೂಟರ್ ಎಂಜಿನಿಯರ್ನಿಂದ ಲೇಖಕಿಯಾಗಿ ರೂಪಾಂತರಗೊಂಡಿರುವ ರೂಪಾ ಪೈ ಅವರು The Gita for Children ಹಾಗೂ ಜನಪ್ರಿಯ Taranauts ಸರಣಿಯು ಸೇರಿದಂತೆ 35ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.ಈ ಸಂಜೆ ಎಲ್ಲಾ ವಯೋಮಾನದ ಓದುಗರಿಗೂ ಲೇಖಕಿಯನ್ನು ಭೇಟಿಯಾಗುವ ಅಪರೂಪದ ಅವಕಾಶವನ್ನು ನೀಡುತ್ತದೆ.
ಅದೇ ದಿನ, ELC ಕ್ಯಾಂಪಸ್ನಲ್ಲಿ IMTC ಕೋರಮಂಗಲದ ತರಬೇತಿ ನಿರ್ದೇಶಕಿ ಲತಾ ರಾವ್ ಹಾಗೂ IMTC ಮಂಗಳೂರು ತರಬೇತಿ ನಿರ್ದೇಶಕಿ ಜಯಶ್ರೀ ಗುರುಪ್ರಸಾದ್ ಅವರ ಉಪನ್ಯಾಸ ನಡೆಯಲಿದೆ. ಈ ಮುಕ್ತಗೃಹ ದಿನದಲ್ಲಿ ದಿ ಲರ್ನಿಂಗ್ ಸೆಂಟರ್ನಲ್ಲಿ ಅನುಸರಿಸಲಾಗುತ್ತಿರುವ ವೀಕ್ಷಣೆ ಹಾಗೂ ಪ್ರಶ್ನಾಧಾರಿತ ಕಲಿಕೆಯ ಪೆಡಗಾಜಿಯನ್ನು ಪ್ರದರ್ಶಿಸಲಾಗುತ್ತದೆ.
CFALನ ನಾಟಕ ಕ್ಲಬ್ ಶ್ರೀನಿವಾಸ ರಾಮಾನುಜನರ ಜೀವನಾಧಾರಿತ ನಾಟಕವನ್ನು ಪ್ರದರ್ಶಿಸಲಿದೆ. ಜೊತೆಗೆ ಅವರ ಗಣಿತ ಕೃತಿಗಳ ಆಧಾರಿತ ಗಣಿತ ಪ್ರದರ್ಶನವೂ ನಡೆಯಲಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಡಳಿತ ಸುಧಾರಣೆ) ಕಾರ್ಯದರ್ಶಿಗಳಾದ ಶ್ರೀಮತಿ ತುಳಸಿ ಮದ್ದಿನೇನಿ, ಐಎಎಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕ ಸೇವೆ ಮತ್ತು ಆಡಳಿತದಲ್ಲಿ ತಮ್ಮ ವಿಶಾಲ ಅನುಭವವನ್ನು ಆಧರಿಸಿ, ಮಹಿಳೆಯರ ನಾಯಕತ್ವದ ಮಹತ್ವ ಮತ್ತು ಸಮಾವೇಶಾತ್ಮಕ ನಾಯಕತ್ವವು ಸಂಸ್ಥೆಗಳು ಹಾಗೂ ಸಾರ್ವಜನಿಕ ಜೀವನವನ್ನು ಹೇಗೆ ಬಲಪಡಿಸುತ್ತದೆ ಎಂಬುದರ ಕುರಿತು ಅವರು ಮಾತನಾಡಲಿದ್ದಾರೆ. ಈ ಸತ್ರವನ್ನು ಡಾ. ಸ್ಮಿತಾ ಹೆಗಡೆ ಸಹ-ಸಂಚಾಲನೆ ಮಾಡಲಿದ್ದು, ಅವರು ಮಂಗಳೂರಿನಲ್ಲಿ CFAL ನಡೆಸುತ್ತಿರುವ ‘ಅಮರ’ ಹಸಿರುಕರಣ ಉಪಕ್ರಮದ ಕುರಿತು ತಮ್ಮ ಕಾರ್ಯವನ್ನು ಹಂಚಿಕೊಳ್ಳಲಿದ್ದಾರೆ.
ಕನೆಕ್ಟೆಡ್ ವಿಜ್ಡಮ್ ಕುರಿತು:
ಕನೆಕ್ಟೆಡ್ ವಿಜ್ಡಮ್ ಎಂಬುದು ELC ಮತ್ತು CFAL ಅಲ್ಲಿ ಅವರು ಎಲ್ಲಾ ಕ್ಷೇತ್ರಗಳ ಕಲಿಕೆಗೆ ಪ್ರಾರಂಭೋತ್ಸವವನ್ನು ಮಾಡಲಾಯಿತು. ಇದರ ಉದ್ದೇಶ ಮಕ್ಕಳು, ಶಿಕ್ಷಕರು ಮತ್ತು ಸಮುದಾಯವನ್ನು ಕಥೆಗಾರರು, ಲೇಖಕರು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂಪರ್ಕಿಸಿ ತಮ್ಮ ಜ್ಞಾನದ ಅಭಿವೃದ್ಧಿಯನ್ನು ಹೆಚ್ಚಿಸುವುದು. ವಿಭಿನ್ನ ಕ್ಷೇತ್ರಗಳ ಪರಿಣಿತರೊಂದಿಗೆ ನೇರ ಸಂವಾದದ ಮೂಲಕ ಈ ಉಪಕ್ರಮವು ಕುತೂಹಲ, ಸಹಾನುಭೂತಿ ಮತ್ತು ಪರಂಪರೆಯ ಮೆಚ್ಚುಗೆಯನ್ನು ಬೆಳೆಸುತ್ತದೆ. ಇದುವರೆಗೆ ಡಾ. ರಾಮಚಂದ್ರ ಹೆಬ್ಬಾರ್ (ISRO), ಅಮೃತಾ ಶಾ, ಪ್ರಿಯಾ ಮುತುಕುಮಾರ್, ನಂದಿತಾ ಜಯರಾಜ್, ಚಂದಿನಿ ಛಬ್ಬ್ರಾ, ನೆಸ್ಟರ್ ಫೆರ್ನಾಂಡಿಸ್, ಮಮತಾ ರೈ, ಪ್ರವೀಣ್ ಆಳ್ವ, ರಾಜೇಶ್ ವಿದ್ಯಾಸಾಗರ್ (ವಿಶ್ವ ಬ್ಯಾಂಕ್), ಅಭಿಷೇಕ ಕೃಷ್ಣಗೋಪಾಲ್, ಡಾ. ಜನಾರ್ಧನನ್ ಹವಂಜೆ, ಫಾದರ್ ಜೇಸನ್ಪಿಂಟೋ ಸೇರಿದಂತೆ ಅನೇಕರು ಸತ್ರಗಳನ್ನು ನಡೆಸಿದ್ದಾರೆ.
ಈ ಎಲ್ಲ ಅನುಭವಗಳು ಕಲಿಕೆಯನ್ನು ಸ್ಥಿರ ಪರಂಪರೆಯ ಜ್ಞಾನಕ್ಕೆ ಸಂಪರ್ಕಿಸುವ ಅರ್ಥಪೂರ್ಣ ಪ್ರಯತ್ನಗಳಾಗಿವೆ. ಕನೆಕ್ಟೆಡ್ ವಿಜ್ಡಮ್ ಮೂಲಕ ELC ಮತ್ತು CFAL ಅಲ್ಲಿ ಕಲಿಯುವವರು ಆಲೋಚನೆಗಳೊಂದಿಗೆ ಆಳವಾಗಿ ತೊಡಗಿಕೊಳ್ಳುವ, ವಿವಿಧ ವಿಷಯಗಳ ಜ್ಞಾನವನ್ನು ಸಂಪರ್ಕಿಸುವ ಮತ್ತು ಜೀವನಪೂರ್ತಿ ಪ್ರಶ್ನೆ ಮತ್ತು ಆತ್ಮಪರಿಶೀಲನೆಯ ಪ್ರೀತಿಯನ್ನು ಬೆಳೆಸುವ ವಾತಾವರಣವನ್ನು ನಿರ್ಮಿಸುತ್ತಿವೆ.

