ಮಂಗಳೂರು: ಕಾರು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನ ನಂತೂರಲ್ಲಿ ನಡೆದಿದೆ. ಹುಂಡೈ ಕಂಪನಿಯ ಕಾರು ಹೊತ್ತಿ ಉರಿದಿದೆ. ಕಾರಿನ ಬೆಂಕಿಯನ್ನು ಸ್ಥಳೀಯರು ನಂದಿಸಿದರು.
ಮೂರು ವಿದ್ಯಾರ್ಥಿಗಳಿದ್ದ ಕಾರಿಗೆ ಬೆಂಕಿ ತಗುಲಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ನೀರಿನ ಟ್ಯಾಂಕರ್ ತಂದು ಬೆಂಕಿಯನ್ನು ಸ್ಥಳೀಯರು ನಂದಿಸಿದ್ದಾರೆ.

