ಮಂಗಳೂರು : ಭಟ್ಕಳ ಮೂರಿನ ಧಾರ್ಮಿಕ ಕಟ್ಟೆ ತೆರವು ಮತ್ತು ಪೊಲೀಸರ ಮೇಲೆ ಹಲ್ಲೆ ಹಿನ್ನಲೆ ರಿಯಾಜ್ ಫರಂಗಿಪೇಟೆ ಹೇಳಿಕೆ ನೀಡಿದ್ದಾರೆ. ಈ ರೀತಿಯ ಘಟನೆಗಳು ಸಮಾಜದಲ್ಲಿ ಶಾಂತಿ ಕದಡುತ್ತದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಹೇಳಿದರು.
ಈ ಘಟನೆಯನ್ನ ಮುಂದಿಟ್ಟು ಕೋಮುಗಲಭೆಗೆ ರಾಜಕಾರಣಿಗಳ ಯತ್ನ ನಡೆಯುತ್ತಿದೆ. ರಾಜಕಾರಣಿಗಳ ವಿರುದ್ದ ಜಾಗರವಾಗಿ ಇರುಬೇಕು. ಮೂರಿನ ಕಟ್ಟೆ ಅನಧಿಕೃತವಾಗಿದ್ದು ಸರಕಾರ ತೆರವುಗೊಳಿಸಬೇಕು. ಕಟ್ಟೆಗಳ ನಿರ್ಮಾಣ ಸಮಾಜದ ಅಶಾಂತಿಗೆ ಕಾರಣವಾಗುತ್ತದೆ.
ಪೊಲೀಸರ ಮೇಲೆ ಹಲ್ಲೆ ಖಂಡನೀಯ. ಹಲ್ಲೆ ಮಾಡಿದವರು ಯಾರೇ ಆದರೂ ಯಾವ ಧರ್ಮಕ್ಕೆ ಸೇರಿದರು ಕಾನೂನು ಕ್ರಮ ಜರುಗಿಸಬೇಕು ಎಂದು ರಿಯಾಜ್ ಫರಂಗಿಪೇಟೆ ಹೇಳಿದರು.

