ಮಂಗಳೂರು: ಇಲ್ಮ್ ಮದರಸ ಕಲಿಸುವ ಸಮಯದಲ್ಲಿ ಒಂದೇ ಒಂದು ಏಟು ಹೊಡೆದ ಕಾರಣ ಸುರತ್ಕಲ್ ಕೃಷ್ಣಾಪುರ ಭಾಗದ ತ್ವೈಭ ಮಸೀದಿಯ ಧರ್ಮಗುರುಗಳಿಗೆ ಮಗುವಿನ ತಂದೆ, ತಾಯಿ ಹಾಗೂ ಕುಟುಂಬಸ್ಥರು ಸೇರಿ ಮಸೀದಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಎಂಟರಿಂದ ಹತ್ತು ಸಾವಿರ ಸಂಬಳ ಕೊಡುವುದಲ್ಲದೇ ಉಸ್ತಾದರಿಗೆ ಬಹಿರಂಗವಾಗಿ ಜೀವ ಬೆದರಿಕೆ ನೀಡುವುದು ಎಷ್ಟು ಸರಿ.? ಉಸ್ತಾದರಿಗೆ ಮಕ್ಕಳು ಕುಟುಂಬವಿಲ್ಲವೇ ..?. ಆದಷ್ಟು ಬೇಗ ಈ ವೀಡಿಯೋ ಮಂಗಳೂರು ಪೊಲೀಸ್ ಕಮೀಷನರ್ ಗೆ ತಲುಪಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಿ, ಇಲ್ಲವಾದರೆ ಅವಮಾನ ತಡೆಯಲಾರದೆ ಉಸ್ತಾದರ ಆತ್ಮಹತ್ಯೆಗಳು ಮುಂದುವರಿಯಬಹುದು.

View this post on Instagram

A post shared by News Karnataka (@newskarnataka)