Bengaluru 24°C
Ad

ದರ್ಶನ್ ಗೆ ಬಿರಿಯಾನಿ ಕೊಟ್ಟಿಲ್ಲ,ಸಿಬ್ಬಂದಿಗಳಿಗೆ ತರಿಸಿದ್ದು : ನಿರ್ಮಾಪಕ ಕುಮಾರ ನಾಯ್ಕ್

ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ತೂಗುದೀಪ್ ಬಂಧನವಾಗಿದೆ. ಖಾಕಿ ವಶದಲ್ಲಿರುವ ಇರುವ ದರ್ಶನ್‌ ಹಾಗು ಅವರ ಟೀಂ ಗೆ ಪೊಲೀಸರು ಬಿರಿಯಾನಿ ನೀಡಿದ್ದರು ಎಂದು ಹೇಳಲಾಗಿತ್ತು.

ತುಮಕೂರು: ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ತೂಗುದೀಪ್ ಬಂಧನವಾಗಿದೆ. ಖಾಕಿ ವಶದಲ್ಲಿರುವ ಇರುವ ದರ್ಶನ್‌ ಹಾಗು ಅವರ ಟೀಂ ಗೆ ಪೊಲೀಸರು ಬಿರಿಯಾನಿ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರವನ್ನು ಚಲನಚಿತ್ರ ನಿರ್ಮಾಪಕ ಕುಮಾರ ನಾಯ್ಕ್ ರಿವೀಲ್‌ ಮಾಡಿದ್ದಾರೆ.

ದರ್ಶನ್ಗೆ ಬಿರಿಯಾನಿ ಕೊಟ್ಟಿಲ್ಲ ಬದಲಿಗೆ ಸಿಬ್ಬಂದಿಗಳಿಗೆ ತರಿಸಿದ್ದು.ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಹಂತಕ್ಕೆ ತಲುಪುವ ಹೊತ್ತಲ್ಲೇ ತನಿಖಾಧಿಕಾರಿಯನ್ನು ದಿಢೀರ್ ಬದಲಾವಣೆ ಮಾಡಿದ ಸರ್ಕಾರದ ಈ ನಿರ್ಧರದ ವಿರುದ್ಧ ಗುಳ್ಳೆನರಿ, ತಲವಾರ್ ಚಿತ್ರದ ನಿರ್ಮಾಪಕ ಕುಮಾರ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ದರ್ಶನ್ ತಂಡವನ್ನು ಬಂಧಿಸುವಲ್ಲಿ ಕಾಮಕ್ಷಿ ಪಾಳ್ಯದ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ಪಾತ್ರ ಶ್ಲಾಘನೀಯ , ಗಿರೀಶ್ ನಾಯ್ಕ್ ಒಬ್ಬ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದವರು .ಕೆವಲ ಎರಡೇ ದಿನದಲ್ಲಿ ಬಂಧಿಸಿದ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದಾರೆ . ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಪೊಲೀಸ್ ಇಲಾಖೆ ಉಳಿಸಿಕೊಳ್ಳಬೇಕಿತ್ತು, ತನಿಖೆಗೆ ಮತ್ತಷ್ಟು ಆಯಾಮ ಸಿಕ್ಕು-ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿತ್ತು ತನಿಖೆಯ ಈ ಹಂತದಲ್ಲಿ ಅವರನ್ನು ಬದಲಾಯಿಸಿದ್ದು ಸಮಂಜಸವಲ್ಲ ಎಂದು ನಿರ್ಮಾಪಕ ಕುಮಾರ ನಾಯ್ಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

Ad
Ad
Nk Channel Final 21 09 2023
Ad