Bengaluru 22°C
Ad

ಸಿಐಎಸ್​ಎಫ್ ಯೋಧ ಆಕಸ್ಮಿಕವಾಗಿ ಗುಂಡು ತಗುಲಿ ಮೃತ್ಯು

ಆಕಸ್ಮಿಕವಾಗಿ ಗುಂಡು ತಗುಲಿ ಆರ್​ಜಿ ಕ್ಯಾಂಪ್‌ ಸಿಐಎಸ್​ಎಫ್ ಯೋಧ ಮೃತಪಟ್ಟ ಘಟನೆ ನಡೆದಿದ್ದು, ಮಾನ್ವಿ ತಾಲೂಕಿನ ರವಿಕಿರಣ್ (37) ಮೃತಪಟ್ಟ ಯೋಧ.

ರಾಯಚೂರು: ಆಕಸ್ಮಿಕವಾಗಿ ಗುಂಡು ತಗುಲಿ ಆರ್​ಜಿ ಕ್ಯಾಂಪ್‌ ಸಿಐಎಸ್​ಎಫ್ ಯೋಧ ಮೃತಪಟ್ಟ ಘಟನೆ ನಡೆದಿದ್ದು, ಮಾನ್ವಿ ತಾಲೂಕಿನ ರವಿಕಿರಣ್ (37) ಮೃತಪಟ್ಟ ಯೋಧ.

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು. ನಿನ್ನೆ (ಮೇ 20) ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್​ನಿಂದ ಸಿಡಿದ ಗುಂಡು ತಾಗಿ ರವಿಕಿರಣ್ ತೀವ್ರವಾಗಿ​ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ. ಯೋಧ ರವಿಕಿರಣ್​ ಪಾರ ಪಾರ್ಥಿವ ಶರೀರ ಇಂದು (ಮೇ 21) ಆರ್​ಜಿ ಕ್ಯಾಂಪ್​ಗೆ ತಲುಪಿದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್​ಜಿ ಕ್ಯಾಂಪ್​ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ. ಯೋಧ ರವಿಕಿರಣ್​ ಅಂತ್ಯಕ್ರಿಯೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಮತ್ತು ಗ್ರಾಮಸ್ಥರು ಯೋಧನಿಗೆ ಅಂತಿಮ‌ ನಮನ ಸಮರ್ಪಿಸಿದರು ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad