ಮೈಸೂರು: ಕನ್ನಡಿಗರಿಗೆ ಬಸವಣ್ಣ, ಕುವೆಂಪು ಅವರ ಆದರ್ಶಗಳ ಆಶೀರ್ವಾದವೇ ಸಾಕು ಪ್ರಧಾನಿ ಮೋದಿ ಅವರ ಆಶೀರ್ವಾದದ ಅಗತ್ಯವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಟಿ. ನರಸೀಪುರ ತಾಲೂಕಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡಿಗರು ಬಿಜೆಪಿಗೆ ಮತ ಹಾಕದಿದ್ದರೆ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಸತ್ಯ, ನ್ಯಾಯ, ಸಮಾನತೆಯ ಪ್ರತೀಕವಾಗಿದ್ದ ಬಸವಣ್ಣ, ಕುವೆಂಪು ಅವರು ಹುಟ್ಟಿದ ನಾಡಿದು ಇಂತಹ ಸ್ಥಳದಲ್ಲಿರುವ ಜನರಿಗೆ ಮೋದಿ ಅವರ ಆಶೀರ್ವಾದ ಅಗತ್ಯವಿಲ್ಲ ಎಂದರು.