ಮೈಸೂರು: ಭಾರತದಲ್ಲಿ ರಂಗಭೂಮಿ ಕಲೆ ಉಳಿದಿರುವುದಕ್ಕೆ ಗ್ರಾಮೀಣ ಜನರು ಕಾರಣರಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಮೈಸೂರು ತಾಲ್ಲೂಕು, ಹಳೆಕಾಮನಕೊಪ್ಪಲು ಗ್ರಾಮದ ಶ್ರೀ ಭಕ್ತಕನಕದಾಸ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡ ಕರೀಗೌಡರ ಅಧ್ಯಕ್ಷತೆಯಲ್ಲಿ ನಡೆದ ಶನಿ ಪ್ರಭಾವ ನಾಟಕದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಂಕ್ರಾತಿ ಹಬ್ಬ ಆಚರಿಸಿದ ನಂತರ ಬೇಸಿಗೆಯಲ್ಲಿ ಯಾವುದೇ ಕೆಲಸಗಳಿರುವುದಿಲ್ಲ ಆ ಸಮಯದಲ್ಲಿ ಮನರಂಜನೆಗಾಗಿ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಕಲಿತು ನೆಂಟರನ್ನೆಲ್ಲಾ ಕರೆದು ಹಬ್ಬವನ್ನೇ ಆಚರಣೆ ಮಾಡಿದಂತೆ ನಾಟಕಗಳನ್ನು ಪ್ರದರ್ಶನ ಮಾಡಿ ಸಂಭ್ರಮಿಸುತ್ತಾರೆ ಇಂತಹ ಕಲಾವಿದರಿಂದಲೇ ಇಂದು ಭಾರತದಲ್ಲಿ ಕಲೆ ಸಂಸ್ಕೃತಿ, ಜಾನಪದ ಕಲೆಗಳು ಇನ್ನೂ ಜೀವಂತವಾಗಿವೆ. ಆದ್ದರಿಂದ ಸರ್ಕಾರ ರಂಗ ಭೂಮಿಕಲೆಯನ್ನು ಬೆಳೆಸುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಯಿಸಬೇಕು ಎಂದರು.
ಸಮಾರಂಭದಲ್ಲಿ ಮೈಮುಲ್ ಮಾಜಿಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಅರುಣ್ಕುಮಾರ್, ರಾಕೇಶ್ ಪಾಪಣ್ಣ, ನಾಗವಾಲ ಗ್ರಾ.ಪಂ. ಅಧ್ಯಕ್ಷ ನರೇಂದ್ರ, ಗ್ರಾ.ಪಂ. ಸದಸ್ಯರಾದ ಹಳೆಕಾಮನಕೊಪ್ಪಲು, ಕರೀಗೌಡ, ಮಟನ್ಬಸವೇಗೌಡ, ಸ್ವಾಮಿ, ಕರಕನಹಳ್ಳಿ ಮಂಜು, ರಮೇಶ್, ಸೆಂಟ್ರಿಂಗ್ ರವಿಕುಮಾರ್, ಭಾಗ್ಯರಮೇಶ್, ಇಲವಾಲ ಸುರೇಶ್, ಶಿವೇಗೌಡ, ಯಜಮಾನ ನಾಗರಾಜ್, ಬೈರೇಗೌಡ, ಶಿವಲಿಂಗೇಗೌಡ, ದೊಡ್ಡಸ್ವಾಮಿ, ವಕೀಲ ನಾಗೇಶ್, ಲಿಂಗದೇವರಕೊಪ್ಪಲು ಮಂಜು, ಜಗದೀಶ್, ಗಾಂಧಿಕುಮಾರ್, ದಳಪತಿ ಮಹಾದೇವ್, ಸೆಂಟ್ರಿಂಗ್ ಮಂಜು, ಯಜಮಾನ್ ಬೋರೇಗೌಡ, ಶಿವಕುಮಾರ್, ಸಾವಿತ್ರಿ ನಾಗರಾಜ್, ಸೀಗಳ್ಳಿ ನಾಗರಾಜು, ಟಿ. ರಾಜು ಹಾಜರಿದ್ದರು.
ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ ಅಮಾನತು…
ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್ ಕೊಲೆ ಆರೋಪಿಗೆ ಎನ್ಕೌಂಟರ್ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…
ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…
ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…
ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…