ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವ ಪ್ರಕ್ರಿಯೆ ಬರದಿಂದ ಸಾಗಿದೆ. ಈಗಾಗಲೇ ಹಲವು ದಾನಿಗಳು ಪ್ರಾಣಿಪಕ್ಷಿಗಳನ್ನು ದತ್ತು ಪಡೆದಿದ್ದು, ಮುಂದೆಯೂ ಪಕ್ಷಿ ಮತ್ತು ಪ್ರಾಣಿಗಳನ್ನು ದತ್ತು ಪಡೆಯುವವರಿಗೆ ಮೃಗಾಲಯದ ಬಾಗಿಲು ಸದಾ ತೆರೆದಿದೆ.
ದಾನಿಗಳ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಿ ಪ್ರಾಣಿಪಕ್ಷಿಗಳನ್ನು ಪಡೆಯಬಹುದಾಗಿದೆ. ಇದೀಗ ಮೈಸೂರಿನ ನಿವಾಸಿ ವಿ.ಜೆ.ಮಿಂಚು ಅವರು ನಾಲ್ಕು ನವಿಲುಗಳನ್ನು ಜೂನ್ 6, 2023ರ ಅವಧಿವರೆಗೆ ದತ್ತು ಪಡೆದಿದ್ದಾರೆ. ನವಿಲುಗಳನ್ನು ದತ್ತು ಪಡೆದ ಮಿಂಚು ಅವರಿಗೆ ಮೃಗಾಲಯ ಅಭಿನಂದನೆ ಸಲ್ಲಿಸಿದೆ.