ಮೈಸೂರು: ಮಹಿಳೆ ತನ್ನ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ ರಂಗದಲ್ಲಿ ಮುನ್ನಡೆದಿದ್ದು, ಹೇಳಿಕೊಳ್ಳಲಾಗದ ಸಮಸ್ಯೆಗಳ ನಡುವೆಯೂ ಯಶಸ್ಸಿನ ಹೆಜ್ಜೆ ಇರಿಸಿದ್ದು, ತನ್ನ ಅರಿವಿನ ಹಂದರ ಇನ್ನಷ್ಟು ವಿಸ್ತಾರಗೊಳಿಸಿದ್ದಾಳೆ ಎಂದು ನಟಿ ರೂಪ ಅಯ್ಯರ್ ಹೇಳಿದ್ದಾರೆ.
ನಗರದ ವಿಶ್ವೇಶ್ವರ ನಗರದಲ್ಲಿರುವ ಕೆ ವಿ ಆರ್ ವೆಡ್ಡಿಂಗ್ ಬೆಲ್ಸ್ ಕಲ್ಯಾಣ ಮಂಟಪದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ವಿಪ್ರ ಸಹಾಯವಾಣಿ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ 30 ಸಾಧಕ ವಿಪ್ರ ಮಹಿಳೆಯರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಎಲ್ಲ ರಂಗಗಳಲ್ಲೂ ದಾಪುಗಾಲಿಡುತ್ತಿರುವ, ಅಂತಹ ಎಲ್ಲ ಕ್ಷೇತ್ರಗಳಲ್ಲಿಯೂ ಒಂದಿಲ್ಲೊಂದು ಸಮಸ್ಯೆ, ಸಂಭ್ರಮ ಎಲ್ಲವನ್ನೂ ಎದುರಿಸುತ್ತಲೇ ಮಹಿಳೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಹ್ಮನ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಈ ಎಲ್ಲ ಯಶಸ್ವಿನ ನಡುವೆಯೂ ಗಂಭೀರ ಹೊಣೆಗಾರಿಕೆಯೂ ಆಕೆಯ ಹೆಗಲಿನಲ್ಲಿದೆ. ಮನೆ, ಉದ್ಯೋಗ, ಸಮಾಜ ಎಲ್ಲದರ ನಡುವೆ ಸಮತೋಲನ ಸಾಧಿಸಬೇಕಾದ ದೃಢ ಚಿತ್ತ ಗಳಿಸಬೇಕಾದ ಸವಾಲು ಅವಳ ಮುಂದಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವ ಹಂತವನ್ನು ನಿಧಾನವಾಗಿ ತಲುಪುತ್ತಿದ್ದಾಳೆ ಎಂಬುದು ಗುರುತಿಸಬೇಕಾದ ಬೆಳವಣಿಗೆ ಎಂದು ಹೇಳಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಹಿಳೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ, ವಿಶ್ವ ಸಾಧಕರಲ್ಲಿ ನಾರಿಯರೇ ಮುಂಚೂಣಿಯಲ್ಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸುಗಂಧ ದ್ರವ್ಯಗಳ ತಯಾರಕರು ಹಾಗೂ ಮುಖ್ಯಸ್ಥರದ ಜಾನವಿ ಮೂರ್ತಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷರಾದ ಡಾ.ಲಕ್ಷ್ಮಿ ದೇವಿ, ಕಿರುತರೆ ನಟ ನಾರಾಯಣಸ್ವಾಮಿ, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ, ಅಜಯ್ ಶಾಸ್ತ್ರಿ, ಸಚಿಂದ್ರ, ಚಕ್ರಪಾಣಿ, ನಾಗಶ್ರೀ, ಲತಾ ಬಾಲಕೃಷ್ಣ, ರಂಗನಾಥ್, ಮಹೇಶ್ ಕುಮಾರ್, ಮಿರ್ಲೆ ಮನೀಶ್ ಹಾಗೂ ಇನ್ನಿತರರು ಹಾಜರಿದ್ದರು.