ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಫಲಿತಾಂಶ ಮೇ.13 ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದಿಂದ ಗೆದ್ದಬಂದಿದ್ದು, ಇದೀಗ ಆಡಳಿತ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ.
ಆದರೆ, ಈ ಮಧ್ಯೆ ಸಿಎಂ ಗದ್ದುಗೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಇನ್ನು ಈ ಹಿನ್ನಲೆ ಮೈಸೂರಿನಲ್ಲಿ ಸಿದ್ದು ಪರ ಅಭಿಮಾನಿಗಳು ನಂಜನಗೂಡು ಶ್ರೀಕಂಠೇಶ್ವರನ ಮೊರೆ ಹೋಗಿದ್ದಾರೆ. ಹೌದು 101 ತೆಂಗಿನಕಾಯಿ ಈಡುಗಾಯಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ವಿಶೇಷ ಸೇವೆ, ಈಡುಗಾಯಿ, ಸಿದ್ದರಾಮಯ್ಯ ಸಿಎಂ ಆಗಲೆಂದು ನಂಜುಂಡೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.