News Karnataka Kannada
Tuesday, May 07 2024
ಮೈಸೂರು

ಮೈಸೂರಿನಲ್ಲಿ ಬ್ರಾಹ್ಮಣರ ಅವಹೇಳನ ಖಂಡಿಸಿ ಪ್ರತಿಭಟನೆ

Mysr
Photo Credit : By Author

ಮೈಸೂರು: ಬ್ರಾಹ್ಮಣ ಜನಾಂಗದ ವಿರುದ್ಧವಾಗಿ ದೆಹಲಿಯ ಜೆ.ಎನ್.ಯು ವಿಶ್ವವಿದ್ಯಾನಿಲಯದ ಗೋಡೆಗಳ ಮೇಲೆ ಬರೆದಿರುವ ಕಿಡಿಗೇಡಿಗಳನ್ನು ಸರ್ಕಾರ ಬಂಧಿಸಿ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಹಾಗೂ ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ವತಿಯಿಂದ ಮೈಸೂರು ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಬ್ರಾಹ್ಮಣ ಜನಾಂಗದ ಮೇಲೆ ಕೆಲವು ಕಿಡಿಗೇಡಿಗಳು ಪದೇಪದೇ ಅವಹೇಳನ ಮಾಡಿ ಸಮಾಜದಲ್ಲಿ ಶಾಂತಿ ಕೆದಡುವ ವಾತಾವರಣಕ್ಕೆ ಮುಂದಾಗುತ್ತಿದ್ದು ಇವರ ಮೇಲೆ ಸರ್ಕಾರ ಸೂಕ್ತ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕಿದೆ, ಈ ಹಿಂದೆ ಪಾ.ಮಲ್ಲೇಶ್ ಬ್ರಾಹ್ಮಣ ಜನಾಂಗದ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಬ್ರಾಹ್ಮಣ ಸಮಾಜ ಭುಗಿಲೇಳುವಂತೆ ಮಾಡಿ ಸಮಾಜದಲ್ಲಿ ಶಾಂತಿ ಕೆದಡಲು ಪ್ರಯತ್ನಿಸಿದರು, ಈಗ ಮುಂದುವರೆದು ವರುಣಾ ವಿಧಾನಸಭಾ ಶಾಸಕ ಯತೀಂದ್ರ ಸಿದ್ಧರಾಮಯ್ಯ ಬ್ರಾಹ್ಮಣ ಜನಾಂಗ ಶೇ.ರಷ್ಟುಮಂದಿಯಿದ್ದು ಅವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ತಪ್ಪಾಗಿ ಹೇಳಿ ಜಾತಿಜಾತಿಗಳ ವಿರುದ್ಧ ವಿಷ ಬೀಜ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ಮಕ್ಕಳಿಗೆ ಯುವಜನಾಂಗಕ್ಕೆ ಶಿಕ್ಷಣವನ್ನ ನೀಡಿ ಭವಿಷ್ಯ ರೂಪಿಬೇಕಿರುವ ಜೆ.ಎನ್.ಯು ವಿದ್ಯಾನಿಲಯಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿರುವುದು ದೇಶವಿರೋಧಿ ಘೋಷಣೆಗಳು ಪ್ರಕರಣಗಳು ನಡೆಯುತ್ತಿದ್ದು, ಸರ್ವರಿಗೂ ಶಿಕ್ಷಣ ದೊರೆಯಬೇಕು ಎನ್ನುವ ಸರ್ಕಾರದ ನಿಯಮದಲ್ಲಿ ಬ್ರಾಹ್ಮಣರು ಜೆ.ಎನ್.ಯು ಬಿಟ್ಟು ಹೋಗಿ ಎಂದು ಗೋಡಗಳ ಮೇಲೆ ಬರೆದಿರುವ ಕಿಡಿಗೇಡಿಗಳನ್ನು ಬಂಧಿಸಲು ಸರ್ಕಾರ ಮುಂದಾಗಬೇಕಿದೆ

ಒಬ್ಬ ಜವಬ್ದಾರಿಯುತ ಜನಪ್ರತಿನಿಧಿ ಶಾಸಕ ಯತೀಂದ್ರರಿಗೆ ಕಾನೂನು ಪರಿಪಾಲನೆ ನೀತಿ ನಿಯಮದ ಅರಿವಿಲ್ಲದಿರುವುದು ಆತ ವೈದ್ಯ ವಿದ್ಯಾವಂತನೇ ಎಂಬಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ 144ಕ್ಕೂ ಹೆಚ್ಚು ಮೇಲ್ಜಾತಿಗಳಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸಿದ್ದು ಇದನ್ನು ಸುಪ್ರಿಂಕೋರ್ಟ್ ಸಹ ಅಂಗೀಕರಿಸಿ ಜಾರಿಗೆ ಬರುವಂತೆ ಸೂಚಿಸಿದೆ ಆದರೆ ಶಾಸಕ ಯತೀಂದ್ರ ಸಿದ್ಧರಾಮಯ್ಯರಿಗೆ ಇದರ ಬಗ್ಗೆ ಕನಿಷ್ಠ ಜ್ಞಾನವು ಇಲ್ಲದಿರುವುದು ವಿಪರ್ಯಾಸ, ಇಂಥವರು ಇನ್ನೇನು ಜನಪರ ಕೆಲಸ ಮಾಡಲು ಸಾಧ್ಯವಿದೆ, ಯತೀಂದ್ರ ನೀಡಿರುವ ತಪ್ಪು ಹೇಳಿಕೆಯನ್ನು ಈ ಕೂಡಲೇ ಹಿಂಪಡೆದು ಸರ್ಕಾರ ಮತ್ತು ಸುಪ್ರಿಂ ಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥೈಸಿ ಸಾರ್ವಜನಿಕರಿಗೆ ಹೇಳಬೇಕು, ಮತ್ತು ಜೆ.ಎನ್.ಯು ವಿಶ್ವವಿದ್ಯಾನಿಲಯದಲ್ಲಿ ಬ್ರಾಹ್ಮಣ ಜನಾಂಗದ ವಿರುದ್ಧವಾಗಿ ಚಟುವಟಿಕೆ ನಡೆಸಿ ಶಾಂತಿ ವ್ಯವಸ್ಥೆ ಕೆದಡಲು ಕಾರಣರಾಗಿರುವವರನ್ನ ಬಂಧಿಸಿ ಕಠಿಣಕ್ರಮ ಕೈಗೊಳಗಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಪರಮಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ಲೇಖಕರು ಹಾಗೂ ನಿವೃತ್ತ ತಹಸೀಲ್ದಾರರಾದ ರಂಗನಾಥ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್, ಕಡಕೋಳ ಜಗದೀಶ್, ಜಯಸಿಂಹ ಶ್ರೀಧರ್, ರಂಗನಾಥ್, ವಿಕಾಶ್ ಶಾಸ್ತ್ರಿ, ವಿಪ್ರ ಪ್ರೊಫೆಷನಲ್ ಸುಧೀಂದ್ರ, ಓಂ ಶ್ರೀನಿವಾಸ್, ಅಪೂರ್ವ ಸುರೇಶ್ ,ಮಿರ್ಲೆ ಪನೀಶ್, ವಾಸುದೇವ್ ಮೂರ್ತಿ, ಮಂಜುನಾಥ್, ಸುಚೇಂದ್ರ, ಪ್ರಶಾಂತ್,ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಕಲ್ಕೆರೆ ನಾಗರಾಜ್, ಆರ್ಯ ಮಿತ್ರ ಹರೀಶ್ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು