ಮೈಸೂರು

ಕವಿ ಮಾಗಬೇಕು ಆಗ ಕವಿತೆ ಬಾಗುತ್ತದೆ: ಬನ್ನೂರು ರಾಜು

ಮೈಸೂರು: ಯಾವುದೇ ರೀತಿಯ ಕಾವ್ಯಕ್ಕೂ ಒಂದು ಹದವಿದ್ದು ಕವಿಯಾದವನು ಕವಿತೆ ಕಟ್ಟುವ ಮೊದಲು ತಾನೂ ಹದಗೊಂಡು ಮಾಗಬೇಕು ಆಗ ಕವಿತೆ ಬಾಗುತ್ತದೆಂದೂ,ವಿಶೇಷವಾಗಿ ಹೇಗೆ ಬೇಕಾದರೂ ಬರೆಯಬಲ್ಲ ಛಾತಿ ಹಾಗು ಪದಗಳನ್ನು ಬೆಂಡೆತ್ತುವ ಕಲೆ ಕವಿಗಿರಬೇಕಾಗಿದ್ದು ಇದನ್ನು’ಕಾಶಿಗೌ’ ಕಾವ್ಯನಾಮದ ಕವಿ ಕಾಡ್ನೂರು ಶಿವೇಗೌಡರು ಸಿದ್ಧಿಸಿಕೊಂಡಿದ್ದಾರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಶಿವರಾಂಪೇಟೆಯ ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ವತಿಯಿಂದ ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ‘ ಕಾಶಿಗೌ ‘ ಕಾವ್ಯನಾಮದ ಕವಿ ಕಾಡ್ನೂರು ಶಿವೇಗೌಡರ ಆರದ ಅರುವತ್ತು ,ಮನದಾಳದ ನಾದ, ಒಡಲ ಮಾತು, ಒಳಗೊಂಡಂತೆ ಮೂರು ಕವನ ಸಂಕಲಗಳ ಲೋಕಾರ್ಪಣೆ ಮತ್ತು ಪ್ರಸ್ತುತ ವಯೋನಿವೃತ್ತಿ ಹೊಂದಿದ ಕಾಲೇಜಿನ ಪ್ರಾಂಶುಪಾಲರೂ ಆದ ಶಿವೇಗೌಡರ ಬೀಳ್ಕೊಡುಗೆ ಹಾಗೂ ಶುಭ ಹಾರೈಕೆ ಸಮಾರಂಭದಲ್ಲಿ ಭಾಗವಹಿಸಿ ಮೂರೂ ಕೃತಿಗಳ ಬಗ್ಗೆ ಮಾತನಾಡಿದ ಅವರು, ಈ ಮೂರೂ ಕೃತಿಗಳು ವಿದ್ಯಾರ್ಥಿಗಳ ನಾಡಿ ಮಿಡಿತವನ್ನು ಅದರಲ್ಲೂ ಬಹು ಮುಖ್ಯವಾಗಿ ಹಳ್ಳಿಗಾಡಿನ ಮಣ್ಣಿನ ಮಕ್ಕಳ ಅಯನವನ್ನು ಆಳವಾಗಿ ಅರಿತ ಅರಿವಿನ ಉಪನ್ಯಾಸಕರಾಗಿ , ಪ್ರಬುದ್ಧ ಬೋಧಕರಾಗಿ, ಪ್ರಾಂಶುಪಾಲ ರಾಗಿ ಸುಮಾರು ಮೂರೂವರೆ ದಶಕಗಳಿಂದಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿ ರುವ ಶಿವೇಗೌಡರ ಅನುಭವ ಮತ್ತು ಅನುಭಾವದ ದೇಸೀ ಕಾವ್ಯಕ್ಕೆ ಸಾಕ್ಷಿಗಲ್ಲುಗಳೆಂದರು.

ಶಿಕ್ಷಣ ಪರ ಕಾಳಜಿಯ, ಸಮಾಜಮುಖಿ ಚಿಂತನೆಯ ಸರಳ, ಸಜ್ಜನಿಕೆಯ, ಜನೋಪಯೋಗಿ ವ್ಯಕ್ತಿತ್ವದ ಕವಿ ಶಿವೇಗೌಡರು ಸಂಪೂರ್ಣ ಕಾವ್ಯಮುಖಿಯಾಗಿದ್ದು ಮನದಾಳದ ನಾದ ಮತ್ತು ಒಡಲ ಮಾತು ಹಾಗು ಆರದ ಅರುವತ್ತು ಕೃತಿಗಳ ಮೂಲಕ ಜನೋಪಯೋಗಿ ಕವಿತೆಗಳನ್ನು ರಚಿಸಿದ್ದು ಕನ್ನಡ ಕಾವ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಸುಮಾರು ಮೂರ್ನಾಲ್ಕು ದಶಕಗಳಿಂದಲೂ ಅವರೊಳಗೆ ಸುಪ್ತವಾಗಿ ಅಡಗಿದ್ದ ಕವಿತೆಗಳೆಲ್ಲವನ್ನೂ ಈಗ ಮುಕ್ತವಾಗಿ ಒಮ್ಮೆಗೇ ಹೊರ ಹಾಕಿದ್ದಾರೆ.ಕೇವಲ ಕೆಲವೇ ತಿಂಗಳಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿ ಕಾಶಿಗೌ ಅವರು ಸಾಧನೆ ಮೆರೆದಿದ್ದಾರೆಂದ ಅವರು, ಪ್ರತಿಯೊಂದು ಕವಿತೆಗಳೂ ಒಂದಕ್ಕಿಂತ ಒಂದು ವಿಷಯ ವೈವಿಧ್ಯತೆಯಿಂದ ಚೆಂದವಾಗಿದ್ದು ನಿಸ್ಸಂಶ ಯವಾಗಿಯೂ ಈ ಮೂರೂ ಕೃತಿಗಳು ಕನ್ನಡ ಕಾವ್ಯ ಲೋಕದ ಗಮನ ಸೆಳೆಯ ಬಲ್ಲವು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾದ ನಾಗಮಲ್ಲೇಶ್ ಅವರು, ಆರದ ಅರುವತ್ತು,ಮನದಾಳದ ನಾದ, ಒಡಲ ಮಾತು ಎಂಬ ಮೂರೂ ಕವನ ಸಂಲನಗಳನ್ನು ಲೋಕಾರ್ಪಣೆಗೊಳಿಸಿ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕವಿ ಶಿವೇಗೌಡರ ಕಾವ್ಯ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಪ್ರಕಾಶಕ ಡಿ.ಎನ್. ಲೋಕಪ್ಪ , ಮಹಾಜನ ಕಾಲೇಜಿನ ಉಪನ್ಯಾಸಕರಾದ ಕೋಟೆ ವೆಂಕಟೇಶ್, ಡಾ.ಎಚ್.ಎಂ.ಸ್ವಾಮಿಗೌಡ, ಡಾ. ಎಂ.ಬಾಲರಾಜು, ಹಿರಿಯ ಉಪನ್ಯಾಸಕಿ ಡಾ.ನಾಗಮ್ಮ , ಮೈಸೂರು ಮಹಾನಗರ ಪಾಲಿಕೆಯ ಸದಸ್ಯರೂ ಆದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಂ.ಪ್ರಮೀಳಾ ಭರತ್, ಹಿರಿಯ ಸದಸ್ಯರಾದ ವಿಘ್ನೇಶ್ವರ ವಿ. ಭಟ್, ಫೋಟೋ ರಾಜಗೋಪಾಲ್, ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಾದ ಡಾ.ರಮಾನಂದ್, ಸುದೀಪ್, ಶಿವಕುಮಾರ್, ಆನಂದ್, ಕೃಷ್ಣ, ಕೋಟೆ ವೆಂಕಟೇಶ್, ಎಂ.ವಿ. ಸುನೀತಾ, ಉಷಾ ಎಸ್. ಗೋಂದಳಿ, ಡಾ.ವಿ.ಶ್ರೀಮತಿ, ಡಿ.ಪ್ರಭಾವತಿ, ಎ.ಬಿ. ಸಬಿತಾ, ಎಂ.ಕೆ. ರಾಧಾ, ಸುಶೀಲಾ ವಿ.ಭಟ್ ಕುರ್ಸೆ, ವಿ.ಆನಂದ ಕುಮಾರ್, ಟಿ.ಎಂ.ನಾಗೇಶ್, ಪುಷ್ಪಲತಾ, ಎ.ಎಸ್.ಜಗದೀಶ್, ಎಂ.ಬಾಲರಾಜು, ಆನಂದ್ ಕುಮಾರ್, ಪ್ರಭುಸ್ವಾಮಿ, ಕೆ.ಇ. ಪುಟ್ಟಸ್ವಾಮಿಗೌಡ ಇನ್ನಿತರರು ಉಪಸ್ಥಿತರಿದ್ದರು. ಇದೇ ವೇಳೆ ಇಂದೇ ವಯೋನಿವೃತ್ತಿ ಹೊಂದಿದ ಕಾಲೇಜಿನ ಹಿರಿಯ ಉಪನ್ಯಾಸಕಿ ಸುಶೀಲ ವಿ.ಭಟ್ ಕುರ್ಸೆ ಅವರನ್ನೂ ಅಭಿನಂದಿಸಿ ಶುಭ ಹಾರೈಸಿ ಬೀಳ್ಕೊಡಲಾಯಿತು.

 

Sneha Gowda

Recent Posts

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

7 mins ago

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ…

17 mins ago

ಕೇಜ್ರಿವಾಲ್‌ ನಾಚಿಕೆಯಿಲ್ಲದೇ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗಾಟ: ನಿರ್ಮಲಾ ಸೀತಾರಾಮನ್‌

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವೆ…

18 mins ago

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

41 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

51 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

56 mins ago